ಬಾಕಿ ಬಿಲ್ ಕೊಡಿ ಸ್ವಾಮಿ! ಕ ನೀ ನಿ ಮುಂದೆ ಗುತ್ತಿಗೆದಾರರ ಧರಣಿ!!
ಬೆಳಗಾವಿ: ರಾಜ್ಯ ಸರ್ಕಾರ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನೇನೋ ನೀಡಿದೆ. ಆದರೆ ಗ್ಯಾರಂಟಿ ಗೋಜಿನ ನಡುವೆ ಮಾಡಬೇಕಾದ ಮುಖ್ಯ ಕರ್ತವ್ಯವನ್ನು ಸರ್ಕಾರ ಮರೆಯುತ್ತಿದೆಯಾ ಎಂಬ ಅನುಮಾನಗಳು ಪ್ರಾರಂಭವಾಗುತ್ತಿವೆ. ಈ ಹಿಂದೆಯೂ ಸಹ ಗುತ್ತಿಗೆದಾರರು ತಮ್ಮ ಬಾಕಿ ಬಿಲ್ಗಾಗಿ ಪ್ರತಿಭಟಿಸಿದ ಉದಾಹರಣೆಗಳು ಕಣ್ಮುಂದೆಯೇ ಇವೆ. ಸಧ್ಯ ಅಂತದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕರ್ನಾಟಕ ರಾಜ್ಯ ನೀರಾವರಿ ನಿಗಮದಲ್ಲಿ(ಕ ನೀ ನಿ) ವಿವಿಧ ಕೆಲಸಗಳನ್ನು ಮಾಡಿದ ಗುತ್ತಿಗೆದಾರರು ತಮಗೆ ಬರಬೇಕಾದ ಬಾಕಿ ಬಿಲ್ ಗಾಗಿ ಪ್ರತಿಭಟನೆ ಕುಳಿತಿದ್ದಾರೆ.ಬೆಳಗಾವಿಯಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಕಚೇರಿಯ ಮುಂದೆ ಸುಮಾರು 30...