ಖಾನಾಪುರ: ಪಟ್ಟಣದ ಮಿನಿವಿಧಾನಸೌದದಲ್ಲಿರುವ ಉಪನೋದಣಾಧಿಕಾರಿ ಕಛೇರಿ ಅವ್ಯವಸ್ಥೆ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳು ತಹಶಿಲ್ದಾರ ಮೂಲಕ ಮನವಿ ಸಲ್ಲಿಸಿದವು
ಉಪನೋಂದಣಾಧಿಕಾರಿ ಕಛೇರಿ ಸಿಬ್ಬಂದಿ ಸರಿಯಾದ ಸಮಯಕ್ಕೆ ಕಛೇರಿಗೆ ಬರುವದಿಲ್ಲ ಹೀಗಾಗಿ ಹಳ್ಳಿಗಳಿಂದ ಬರುವ ಜನಸಾಮಾನ್ಯನಿಗೆ ಕಛೇರಿ ಕೆಲಸಗಳಲ್ಲಿ ವಿಳಂಬವಾಗುತ್ತಿದ್ದು ಮತ್ತು ಸಿಬ್ಬಂದಿಗಳು ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು ಏಜೆಂಟರ ಹಾವಳಿ ತಪ್ಪಿಸಬೇಕು ಎಂದು ಮನವಿ ಸಲ್ಲಿದರು ಈ ಸಂದರ್ಭದಲ್ಲಿ ಮಾತನಾಡಿದ ಭೀಮ ಆರ್ಮಿ ತಾಲ್ಲೂಕು ಅಧ್ಯಕ್ಷ ಸಂದೀಪ ಛಲವಾದಿ ನಮ್ಮದು ಗುಡ್ಡ ಗಾಡುಗಳಿಂದ ಕೂಡಿದ ತಾಲ್ಲೂಕು ಹಳ್ಳಿಗಳಿಂದ ಜನ ತಾಲ್ಲೂಕಿಗೆ ಬರಬೇಕಾದರೆ ಹರಸಾಹಸ ಪಡಬೇಕು ಹಾಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಕಛೇರಿಯಲ್ಲಿಲ್ಲದ ಕಾರಣ ವರ ಕೆಲಸಗಳಿಗೆ ತೊಂದರೆಯಾಗುತ್ತಿದ್ದು ಅನಿವಾರ್ಯವಾಗಿ ಎಜೆಂಟರ ಮೋರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇನ್ನು ಒಂದು ವಾರದ ಒಳಗೆ ಈ ಅವ್ಯವಸ್ಥೆ ಸರಿಯಾಗದೇ ಹೋದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಶರದ್ ಹೋನ್ನಾಯಿಕ, ರಾಜಶೇಖರ ಹಿಂಡಲಗಿ, ರಾಜು ಕಾಂಬಳೆ, ರಾಘವೇಂದ್ರ ಚಲವಾದಿ ಇನ್ನಿತರರು ಉಪಸ್ಥಿತರಿದ್ದರು.