ರಾಜ್ಯ

ಕ್ಷುಲ್ಲಕ ಕಾರಣಕ್ಕೆ ಜಗಳ  ಕೊಲೆಯಲ್ಲಿ ಅಂತ್ಯ 

ಹೊಸಕೋಟೆ : ಕಾರು ನಿಲ್ಲಿಸುವ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಯುವಕನಿಗೆ ಇರಿದು ಕೊಲೆ ಮಾಡಿರುವ ಘಟನೆ ಅನುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಾಲ್ಲೂಕಿನ ಮೆಡಿಮಲ್ಲಸಂದ್ರ ಗ್ರಾಮದ ಇಸ್ಮಾಯಿಲ್ ಖಾನ್(26) ಕೊಲೆಯಾದ ಯುವಕ.
ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಇಸ್ಮಾಯಿಲ್ ಖಾನ್ ರಾತ್ರಿ ಕಾರು ನಿಲ್ಲಿಸುತ್ತಿದ್ದಾಗ ಗುಂಪಿನ ನಡುವೆ ಜಗಳವಾಗಿದೆ. ಗುಂಪಿನಲ್ಲಿದ್ದ ಸಯ್ಯದ್ ಇದಾಯತ್, ಸಯ್ಯದ್ ಅಜೀಂ ಶಾ ಮತ್ತು ಸೈಯದ್ ಅಖಿಲ್ ಶಾ ಎಂಬುವರು ಸೇರಿಕೊಂಡು ಏಕಾಏಕಿ ಇಸ್ಮಾಯಿಲ್ ಖಾನ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.ಸುದ್ದಿ ತಿಳಿದು ಅನುಗೊಂಡನ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಅನುಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 
TV24 News Desk
the authorTV24 News Desk

Leave a Reply