ಬೆಳಗಾವಿ

ಕಾಡುಕೋಣ ಮಾಂಸ ಮಾರಾಟ ಮಾಡುತ್ತಿದ್ದ ಖದೀಮರನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು

ಖಾನಾಪೂರ  ನಂದಗಡದಲ್ಲಿ ಕಾಡುಕೋಣ ಬೇಟೆ ಆಡಿ ಅದರ ಮಾಂಸ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಇವರ ಮಾರ್ಗದರ್ಶನದಲ್ಲಿ ಖಾನಾಪೂರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌವ್ಹಾಣ್ ,ಉಪ ಅರಣ್ಯ ಸಂರಕ್ಷಣಾಧಿಕಾರಿ ಕವಿತಾ ಈರನಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.ನಂದಗಡ ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಾಳಪ್ಪ ಲಚ್ಯಾಣ ಅವರು ಮಾಂಸ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಜಾಲಬಿಸಿ ನಂದಗಡದ ಕಲಾಲ ಗಲ್ಲಿಯ ಹಸನ್ ಅಬ್ದುಲ್ ರೆಹಮಾನ್ ಬೇಪಾರಿ ಅದರಂತೆ ಹಲಸಿ ಗ್ರಾಮದ ಡೇವಿಡ್ ರೆಹಮಾನ್ ಫಿಗೇರ ಇವರನ್ನು ಬಂಧಿಸಿ ಅವರಿಂದ ಸುಮಾರು 11 ಕೆ.ಜಿ ಕಾಡುಕೋಣದ ಮಾಂಸ ಮತ್ತು ಸದರಿ ಕೃತ್ಯಕ್ಕೆ ಬಳಸಿದ ಒಂದು ಸ್ಕೂಟಿ ಬೈಕ್ , ಎರಡು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡು ಅವರು ವಿರುದ್ಧ ವನ್ಯ ಜೀವಿ ತಕ್ಷೀರು ವರದಿ ಸಂಖ್ಯೆ 01/2022/23 ನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.ಈ ಸಂದರ್ಭದಲ್ಲಿ ಅರಣ್ಯ ಪಾಲಕರಾದ ರಾಘವೇಂದ್ರ ಕಂಟಿಕಾರ, ಮಲ್ಲೇಶಪ್ಪ ಬಿರಾದಾರ ,ಸಮೀರ ಶೇಖ್ ಉಪಸ್ಥಿತರಿದ್ದರು.ಇನ್ನು ಕೆಲವು ಜನರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದ್ದು ಅವರ ಶೋಧ ಕಾರ್ಯ ಮುಂದೆವರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
TV24 News Desk
the authorTV24 News Desk

Leave a Reply