ನವದೆಹಲಿ: ಸಾಲು ಸಾಲು ಹಬ್ಬದ ಮುಂಚಿತವಾಗಿ ಜನತೆಗೆ ಕೇಂದ್ರಸರ್ಕಾರ ಸಿಹಿ ಸುದ್ದಿ ನೀಡಿದೆ.ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹಬಳಕೆ ಅನಿಲ ಸಿಲೆಂಡರ್ (ಎಲ್ಪಿಜಿ) ಬೆಲೆಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತು.ಗ್ರಾಹಕರಿಗೆ ರಕ್ಷಾಬಂಧನ, ಓಣಂ ಉಡುಗೊರೆಯಾಗಿ ಕೇಂದ್ರಸರ್ಕಾರ ಉಜ್ವಲ ಯೋಜನೆಯಡಿ 14 ಕೆಜಿ ಎಲ್ಪಿಜಿ ಪ್ರತಿ ಸಿಲಿಂಡರ್ಗೆ 200ರೂ ಸಬ್ಸಿಡಿಯನ್ನು ಪಡೆಯುತ್ತಾರೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಎಲ್ಪಿಜಿ ಸಿಲಿಂಡರ್ಗಳ ಎಲ್ಲಾ ದೇಶೀಯ ಗ್ರಾಹಕರು ಪ್ರತಿ ಸಿಲಿಂಡರ್ಗೆ ರೂ 200 ಸಬ್ಸಿಡಿಯನ್ನು ಪಡೆಯುತ್ತಾರೆ. ಇದಲ್ಲದೆ, ಪಿಎಂ ಉಜ್ವಲ ಯೋಜನೆಯಡಿಯಲ್ಲಿ ಡಟಬಲ್ ಸಬ್ಸಿಡಿ ಸಿಗಲಿದೆ. ಸುಮಾರು 33 ಕೋಟಿ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ ಮತ್ತು ಇಂದಿನಿಂದ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದರು.