ಬಾಗಲಕೋಟೆ:
ಬಡಕುಟುಂಬದಲ್ಲಿ ಬೆಳೆದು ವಿಧ್ಯಾಭ್ಯಾಸಕ್ಕಾಗಿ ತೊಂದರೆ ಪಡುತ್ತಿದ್ದ ಬಡ ವಿದ್ಯಾರ್ಥಿನಿಗೆ ಖ್ಯಾತ ಕ್ರಿಕೇಟಿಗ ರಿಷಬ್ ಪಂತ್ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮರೆದಿದ್ದಾರೆ.ಬಾಲಗಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರ್ ಎಂಬ ವಿದ್ಯಾರ್ಥಿನಿಯ ಬಿಸಿಎ ತರಗತಿ ಪ್ರವೇಶಕ್ಕೆ ಅವಶ್ಯಕವಿದ್ದ 40 ಸಾವಿರ ರೂಪಾಯಿ ಹಣವನ್ನು ರಿಷಬ್ ಪಂಥ್ ನೀಡಿದ್ದಾರೆ. ಬಡತನದಲ್ಲಿ ಪಿಯುವರೆಗೂ ಓದ್ದಿದ್ದ ಜ್ಯೋತಿ ಪಿಯುಸಿಯಲ್ಲಿ 85 ರಷ್ಟು ಅಂಕ ಗಳಿಸಿದ್ದಳು. ಮುಂದೆ ಓದಬೇಕು ಎಂಬ ಕನಸಿದ್ದರೂ ಸಹ ಸಹ ಕುಟುಂಬದ ಆರ್ಥಿಕ ಪರಿಸ್ಥಿತಿ ಚನ್ನಾಗಿರದ ಕಾರಣಕ್ಕೆ ಜ್ಯೋತಿ ಮುಂದ ಓದುವುದೇ ದುಸ್ತರವಾಗಿತ್ತು. ಸಧ್ಯ ರಿಷಬ್ ಪಂಥ್ ಮಾಡಿರುವ ಸಹಾಯದಿಂದ ಜ್ಯೋತಿ ಅವರು ಜಮಖಂಡಿಯ ಬಿ ಎಲ್ ಡಿ ಕಾಜೇಜಿನಲ್ಲಿ ಬಿಸಿಎ ಪ್ರಥಮ ಸೆಮಿಸ್ಟರ್ ಪ್ರವೇಶ ಪಡೆದುಕೊಂಡಿದ್ದಾರೆ. ತೀರ್ಥಯ ಕಣಬೂರು ಮಠ ಮಗಳಾದ ಜ್ಯೋತಿ ವ್ಯಾಸಾಂಗಕ್ಕೆ ಎದುರಾದ ಆರ್ಥಿಕ ಸಮಸ್ಯೆ ಅನೀಲ್ ಎಂಬುವವರ ಮೂಲಕ ಬೆಂಗಳೂರು ಕ್ರಿಕೇಟ್ ಸ್ನೇಹಿತರ ಮೂಲಕ ಪಂಥ್ ಗೆ ವಿಷಯ ತಿಳಿದಿತ್ತು. ಬೆಂಗಳೂರಿನ ಐಪಿಎಲ್ ಕ್ರಿಕೇಟ್ ಸ್ನೇಹಿತರಿಂದ ರಿಷಬ್ ಪಂಥ್ ಅವರಿಗೆ ವಿಷಯ ತಿಳಿದಾಗ ಪಂಥ ನೇರವಾಗಿ ಬಿ ಎಲ್ ಡಿ ಇ ಕಾಲೇಜಿಗೆ 40 ಸಾವಿರ ಹಣ ಸಂದಾಯ ಮಾಡಿದ್ದಾರೆ. ಸಧ್ಯ ಕಾಲೇಜು ಆಡಳಿತ ಮಂಡಳಿಯೂ ಸಹ ರಿಷಬ್ ಪಂಥ್ ಅವರಿಗೆ ಅಭಿನಂದನಾ ಪತ್ರ ಬರೆದಿದ್ದು ವಿದ್ಯಾರ್ಥಿನಿ ಜ್ಯೋತಿ ಸಹ ಧನ್ಯವಾದ ಅರ್ಪಿಸಿದ್ದಾಳೆ.
















