ಜಿಲ್ಲೆಬೆಳಗಾವಿರಾಜ್ಯ

ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ಮಾಡಾಕತ್ತಾರ್ರಿ ಎಂದು ಫಡ್ನವೀಸ್ ಮೊರೆ ಹೋದ ಎಂಇಎಸ್

ಬೆಳಗಾವಿ:

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಕಡ್ಡಾಯಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಮೊನ್ನೆಯಷ್ಟೆ ಕನ್ನಡ ಕಡ್ಡಾಯಗೊಳಿಸಿದ ವಿಚಾರಕ್ಕೆ ಮಹಾನಗರ ಪಾಲಿಕೆಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಎಂಇಎಸ್ ಮಹಾನಗರ ಪಾಲಕೆ ಸದಸ್ಯರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಎಂಇಎಸ್ ಪಾಲಿಕೆ ಸದಸ್ಯ ರವಿ ಸಾಳುಂಕೆ ಕರ್ನಾಟಕ ಸರ್ಕಾರ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಬೆಳಗಾವಿಯಲ್ಲಿ ಒತ್ತಾಯಪೂರ್ವಕವಾಗಿ ಕನ್ನಡ ಹೇರಲಾಗುತ್ತಿದೆ. ಇದನ್ನು ನೀವು ಪ್ರಶ್ನಿಸಬೇಕು ಎಂದು ತಾವು ಸಲ್ಲಿಸಿದ ದೂರು/ ಮನವಿಯಲ್ಲಿ ಸಾಳುಂಕೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಗಡಿ ವಿವಾದ ನ್ಯಾಯಾಲಯದಲ್ಲಿರುವಾಗ ಕನ್ನಡ ಕಡ್ಡಾಯ ಬೇಡ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಪದೇ ಪದೇ ಕನ್ನಡಿಗರ ಅಸ್ಮಿತೆಯನ್ನು ಕೆಣಕುವ ಹುಣ್ಣಾರವನ್ನು ಎಂಇಎಸ್ ಮಾಡುತ್ತಲೇ ಬರುತ್ತಲಿದ್ದು ಕನ್ನಡದ ನಾಡಲ್ಲಿ ಕನ್ನಡ ಅನುಷ್ಠಾನಕ್ಕೆ ದೊಣ್ಣೆನಾಯಕನ ಅಪ್ಪಣೆ ಬೇಕಾ ಎಂದು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಗೆ ದೂರು ಸಲ್ಲಿಸಿದ ಪಾಲಿಕೆ ಸದಸ್ಯ ಸಾಳುಂಕೆ
TV24 News Desk
the authorTV24 News Desk

Leave a Reply