ಬೆಳಗಾವಿ:ಬೊಮ್ಮಾಯಿ ಸರಕಾರ ಒಂದು ಅನಧಿಕೃತ ಸರಕಾರ. ಅವರಿಗೆ ಜನಬೆಂಬಲ ಸಿಕ್ಕಿಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ್ ವಾಗ್ದಾಳಿ ನಡೆಸಿದರು. ಇಂದು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದರು. ಅವರ ಎಲ್ಲಾ ಸ್ಟ್ಯಾಟರ್ಜಿಗಳು ಫ್ಲಾಪ್ ಆಗಿವೆ. ಕರ್ನಾಟಕದಲ್ಲಿ ಬಿಜೆಪಿ ಯದ್ದು ಫ್ಲಾಪ್ ಶೋ ಎಂದು ಕುಟುಕಿದರು. ಈ ಸರ್ಕಾರ ಸಂವಿಧಾನದ ವಿರುದ್ಧವಾಗಿ ನಿರ್ಮಾಣವಾದ ಸರ್ಕಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೇಲೆ ಎಷ್ಟು ಬಾರಿ ದಾಳಿ ಮಾಡಿಸುತ್ತೀರಿ ಇದು ರಾಜಕೀಯ ದುರುದ್ದೇಶ ಎಂದು ಸುರ್ಜೆವಾಲ್ ಹೇಳಿದರು.
tv24plus.in > Blog > ಜಿಲ್ಲೆ > ಬೆಳಗಾವಿ > ಸರಕಾರದ ವಿರುದ್ಧ ಸುರ್ಜೆವಾಲ್ ವಾಗ್ದಾಳಿ