ಬೆಳಗಾವಿ

ಅಕ್ರಮ ಜಮೀನನ್ನು ಮರಳಿ ಪಡೆದ ನೌಕರರ ಸಂಘ 

ರಾಮದುರ್ಗ:1957 ರಲ್ಲಿ ರಾಮದುರ್ಗ ಪಟ್ಟಣದ ನೌಕರರು ವಿವಿಧ ನಾಟಕಗಳ ಪಾತ್ರಗಳನ್ನ ಮಾಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಪಟ್ಟಣದಲ್ಲಿ ಸಿಟಿ ಸರ್ವೆ 1877/2A ಜಾಗವನ್ನು ಖರೀದಿಸಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ಆ ಜಾಗೆಯನ್ನು ಕೆಲ ಸಾರ್ವಜನಿಕರು ಆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು.
ಇದೀಗ ಆ ಜಾಗೆಯನ್ನು ಮರಳಿ ನಾವು ಕಾನೂನಿನ ಚೌಕಟ್ಟಿನಲ್ಲಿ ಹಿಂಪಡೆಯಲು ಯಶಸ್ವಿ ಆಗಿದ್ದೇವೆ ಎಂದು  ರಾಮದುರ್ಗ ಪಟ್ಟಣದ ನೌಕರರ ಸಂಘ ಅಧ್ಯಕ್ಷರಾದ ಐ ವಾಯ ಪವಾಡೇ ತಿಳಿಸಿದರು.
ಈ ಹಿನ್ನಲೆ ಅಲ್ಲಿ ವಾಸವಾಗಿದ್ದ ಅಂಗಡಿಯ ಮಾಲೀಕರು ಕೂಗು ದಿನಾಂಕ 5-1-2023 ರಿಂದ 11-1-2023 ರ ವರೆಗೆ ಧರಣಿ ಮಾಡಿ ಸುಮಾರು 50 ವರ್ಷಗಳಿಂದ ಕೊರವರ ಸಮಾಜದ ಜನಾಂಗ ರಾಮದುರ್ಗ ಮಿನಿ ವಿಧಾನಸೌಧದ ಎದುರುಗಡೆ ಇರುವ ಜಾಗದಲ್ಲಿ ಸುಮಾರು 50 ವರ್ಷಗಳಿಂದ ಮನೆ ಕಟ್ಟಿ ವಾಸವಾಗಿದ್ದರು. ಆದರೆ ರಾಮದುರ್ಗ್ ಸರ್ಕಾರಿ ನೌಕರರ ಸಂಘದವರು ಅನಕ್ಷರಸ್ಥರಾದ ನಮಗೆ ಮೋಸ ಮಾಡಿ ಆಕ್ರಮವಾಗಿ ಗೊತ್ತಿಲ್ಲದೆ ಜಾಗದ ರೆಕಾರ್ಡ್ ಮಾಡಿಕೊಂಡು ಯಾವುದೇ ತರಹದ ನೋಟಿಸ್ ನೀಡದೆ ಅಂಗಡಿಗಳನ್ನು ತೇರವಿನ ಕಾರ್ಯ ನಡೆಸಿದ್ದಾರೆ ಎಂದು ವೆಂಕಪ್ಪ ಕೊರವರ , ಶೇಖಪ್ಪ ರಾಮಪ್ಪ ಕೊರವರ , ನಾಗರಾಜ್ ಸಾಗರ (ಡಿ ಎಸ್ ಎಸ್ ಅಧ್ಯಕ್ಷರು ಸಾಗರ್ ಶಿವಮೊಗ್ಗ) ಹೇಳಿಕೆ ಕೊಟ್ಟರು. ಇದರ ನಡುವೆ ಕಾನೂನು ಚೌಕಟ್ಟಿನಲ್ಲಿ ಸಿಟಿ ಸರ್ವೇ ನಂಬರ್ 1877 / 2A ನೌಕರರ ಸಂಘದ ಅದಿನಕ್ಕೆ ಮಾಡಲಾಯಿತು. ಎಂದು ತಿಳಿಸಿದರು.
 ಇದೇ ವೇಳೆ ಉಪಸ್ಥಿತಿ ಇದ್ದ ತಸಿಲ್ದಾರ್ ಶ್ರೀ ಮಲ್ಲಿಕಾರ್ಜುನ್ ಹೆಗ್ಗನ್ನವರ್ ಹಾಗೂ ಪಟ್ಟಣದ ಸಿಪಿಐ ಆರ್ ಆರ್ ಪಟ್ಟಣಶೆಟ್ಟಿ, ಆರಕ್ಷಕ ಉಪನಿರೀಕ್ಷಕರು ಎಸ್ ಎಂ ಕಾರಜೋಳ ಅವರ ಉಪಸ್ಥಿತಿಯಲ್ಲಿ ತೆರುವು ಗೊಳಿಸಲಾಯಿತು.
TV24 News Desk
the authorTV24 News Desk

Leave a Reply