ರಾಜ್ಯ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ  ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: 2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂದು ಪ್ರಕಟಿಸಿದೆ.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಒಟ್ಟು 67ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನವೆಂಬರ್‌ 1 ರಂದು ನಾನಾ ಕ್ಷೇತ್ರಗಳ ಒಟ್ಟು 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 67 ಜನರ ಪಟ್ಟಿ ಈ ಕೆಳಗಿನಂತಿದೆ.

ಸಂಕೀರ್ಣ ಕ್ಷೇತ್ರ-ಸುಬ್ಬರಾಮ ಶೆಟ್ಟಿ, ಆರ್‌ವಿ ಸಂಸ್ಥೆಗಳು, ವಿದ್ವಾನ್‌ ಗೋಪಾಲಕೃಷ್ಣ ಶರ್ಮಾ, ಸೋಲಿಗರ ಮಾದಮ್ಮ

ಸೈನಿಕ ಕ್ಷೇತ್ರ-ಸುಬೇದಾರ್‌ ಬಿ.ಕೆ.ಕುಮಾರಸ್ವಾಮಿ

ಚಲನಚಿತ್ರ ಕ್ಷೇತ್ರ : ದತ್ತಣ್ಣ, ಅವಿನಾಶ್, ಕಿರುತೆರೆ-ಸಿಹಿಕಹಿ ಚಂದ್ರು

ಪತ್ರಿಕೋದ್ಯಮ-ಹೆಚ್‌.ಆರ್‌.ಶ್ರೀಶಾ, ಜಿ.ಎಂ.ಶಿರಹಟ್ಟಿ

ವಿಜ್ಞಾನ ಮತ್ತು ತಂತ್ರಜ್ಞಾನ-ಕೆ.ಶಿವನ್‌, ಡಿ.ಆರ್‌.ಬಳೂರಗಿ

ಕೃಷಿ-ಗಣೇಶ್ ತಿಮ್ಮಯ್ಯ, ಚಂದ್ರಶೇಖರ್ ನಾರಾಯಣಪುರ

ಪರಿಸರ-ಸಾಲುಮರದ ನಿಂಗಣ್ಣ

ಪೌರಕಾರ್ಮಿಕ ಕ್ಷೇತ್ರ-ಮಲ್ಲಮ್ಮ ಹೂವಿನಹಡಗಲಿ

ಆಡಳಿತ-ಎಲ್‌.ಹೆಚ್‌.ಮಂಜುನಾಥ್‌, ಮದನ್ ಗೋಪಾಲ್‌

ಹೊರನಾಡು-ದೇವಿದಾಸ ಶೆಟ್ಟಿ, ಅರವಿಂದ್ ಪಾಟೀಲ್‌, ಕೃಷ್ಣಮೂರ್ತಿ ಮಾಂಜಾ

ಹೊರದೇಶ-ಗಲ್ಫ್‌ ದೇಶದ ರಾಜ್‌ಕುಮಾರ್‌

ವೈದ್ಯಕೀಯ-ಡಾ.ಹೆಚ್‌.ಎಸ್‌.ಮೋಹನ್‌, ಡಾ.ಬಸವಂತಪ್ಪ

ರಂಗಭೂಮಿ-ತಿಪ್ಪಣ್ಣ ಹೆಳವರ್‌, ಲಲಿತಾಬಾಯಿ ಚನ್ನದಾಸರ್‌, ಗುರುನಾಥ್ ಹೂಗಾರ್‌, ಪ್ರಭಾಕರ್ ಜೋಶಿ, ಶ್ರೀಶೈಲ ಹುದ್ದಾರ್‌

ಜಾನಪದ-ಸಹಮದೇವಪ್ಪ ಈರಪ್ಪ ನಡಿಗೇರ್‌, ಗುಡ್ಡ ಪಾಣಾರ, ಕಮಲಮ್ಮ ಸೂಲಗಿತ್ತಿ, ಸಾವಿತ್ರಿ ಪೂಜಾರ್‌, ರಾಚಯ್ಯ ಸಾಲಿಮಠ, ಮಹೇಶ್ವರ್ ಗೌಡ

ಸಂಗೀತ-ನಾರಾಯಣ.ಎಂ, ಅನಂತಚಾರ್ಯ ಬಾಳಾಚಾರ್ಯ, ಅಂಜಿನಪ್ಪ ಸತ್ಪಾಡಿ, ಅನಂತ ಕುಲಕರ್ಣಿ

ಸಂಗೀತ ಕ್ಷೇತ್ರದ ಶ್ರೀ ಅನಂತಾಚಾರ್ಯ ಬಾಳಾಚಾರ್ಯ‌, ಜಾನಪದ ಕ್ಷೇತ್ರದ ಶ್ರೀಮತಿ ಸಾವಿತ್ರಿ ಪೂಜಾರ್, ಬಯಲಾಟ ಕ್ಷೇತ್ರದ ಶ್ರೀ ಅಡವಯ್ಯ ಚ.ಹಿರೇಮಠ. ಕ್ರೀಡಾ ಕ್ಷೇತ್ರದ ಶ್ರೀ ದತ್ತಾತ್ರೇಯ ಗೋವಿಂದ ಕುಲಕರ್ಣಿ ಆಯ್ಕೆಯಾಗಿದ್ದು, ಈ ವರ್ಷ ಧಾರವಾಡ ಜಿಲ್ಲೆಯ ಒಟ್ಟು ನಾಲ್ಕು ಜನರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹತ್ತು ಸಂಘ ಸಂಸ್ಥೆಗಳಿಗೆ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ. ಪುರಸ್ಕೃತರಿಗೆ ತಲಾ 5 ಲಕ್ಷ ನಗದು, 25 ಗ್ರಾಂ. ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಪುನೀತ್ ರಾಜ್‌ಕುಮಾರ್​ಗೆ ಕರ್ನಾಟಕ ರತ್ನ: ಸ್ಯಾಂಡಲ್​ವುಡ್‌ನ ಪವರ್  ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕನ್ನಡ ರಾಜ್ಯೋತ್ಸವ ದಿನದಂದು ಪ್ರದಾನ ಮಾಡುವುದಾಗಿ ಹಿಂದೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಜೂನಿಯರ್ ಎನ್‍ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಲ್ಲದೇ ಸೂಪರ್ ಸ್ಟಾರ್ ರಜನಿಕಾಂತ್ ಸಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

 

 

TV24 News Desk
the authorTV24 News Desk

Leave a Reply