ಬೆಳಗಾವಿ: ಮಧ್ಯಪ್ರದೇಶದ ಮೊರೆನಾದಲ್ಲಿ ಶನಿವಾರ ಸಂಭವಿಸಿದ ಭಾರತೀಯ ವಾಯು ಸೇನೆಯ 2 ವಿಮಾನಗಳ ನಡುವಿನ ಅಪಘಾತದಲ್ಲಿ ಬೆಳಗಾವಿಯ ಗಣೇಶಪುರ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಆರ್. ಸಾರಥಿ ಮೃತಪಟ್ಟಿದ್ದಾರೆ. .
ಗ್ವಾಲಿಯರ್ ಸಮೀಪ ನಡೆದ ವಾಯುಪಡೆಯ ಯುದ್ಧ ವಿಮಾನಗಳ ಪತನ ವೇಳೆ ಮೃತಪಟ್ಟಿರುವ ಪೈಲಟ್, ವಿಂಗ್ ಕಮಾಂಡರ್ ಬೆಳಗಾವಿಯ ಗಣೇಶಪುರದ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಅವರ ಪಾರ್ಥೀವ ಶರೀರ ಇಂದು 11.30 ಗಂಟೆಯ ವೇಳೆಗೆ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದೆ.
ಅಲ್ಲಿ ಗೌರವ ಸಮರ್ಪಣೆ ಬಳಿಕ ಪಾರ್ಥೀವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು. ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಲಾಗಿರುತ್ತದೆ.