ರಾಜ್ಯ

ವಿಚ್ಷೇದನ ಪಡೆಯಲು ಮುಂದಾದ ಪತಿ ಮನನೊಂದು ಉಪಾಸನಾ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ

ಬೆಂಗಳೂರುಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸರಗೊಂಡು ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಅಪಾರ್ಟ್​ಮೆಂಟ್​ ಕಟ್ಟಡದ 9 ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರ್ತೂರು ಪೋಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಿಶಾ ಅಪಾರ್ಟ್​ಮೆಂಟ್ ನ ನಿವಾಸಿ ಉಪಾಸನಾ ರಾವತ್​ (30) ಮೃತ ದುರ್ದೈವಿಯಾಗಿದ್ಧಾರೆ. ಈ ಘಟನೆ ಸಂಬಂಧ ಮೃತಳ ಪತಿ ನಿಹಾರ್​ ರಂಜನ್​ ರಾವತ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಕೌಟುಂಬಿಕ ವಿಚಾರದಿಂದ ಜಗಳವಾಗಿ  ಇದರಿಂದ ಬೇಸತ್ತು, ಅಪಾರ್ಟ್​ಮೆಂಟ್​ ಕಟ್ಟಡದ 9 ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ ಎಂದು ಪೊಲೀಸರು ತಿಳಿಸಿದ್ಧಾರೆ. 9ವರ್ಷಗಳ ಹಿಂದೆ ನಿಹಾರ್​ ರಂಜನ್​ ರಾವತ್ ಹಾಗೂ ಉಪಾಸನಾ ರಾವತ್ ವಿವಾಹವಾಗಿದ್ದು, ಅಪಾರ್ಟ್​ಮೆಂಟ್​ ನಲ್ಲಿ ದಂಪತಿ ನೆಲೆಸಿದ್ದರು. ಇಬ್ಬರು ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದರು. ಸಂತಾನ ಇಲ್ಲದ ಕಾರಣ ಇಬ್ಬರ ಮಧ್ಯೆ ಮನಸ್ತಾಪ ಬಂದಿದ್ದು, ವಿಚ್ಷೇದನ ಪಡೆಯಲು ಮುಂದಾಗಿದ್ದರು. ಈ ಹಿನ್ನೆಲೆ ಉಪಾಸನಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ.

TV24 News Desk
the authorTV24 News Desk

Leave a Reply