ಬೆಳಗಾವಿಬೆಳಗಾವಿ ನಗರ

ಪಠಾಣ್ ಚಿತ್ರಕ್ಕೆ ಕುಂದಾನಗರಿಯಲ್ಲಿ ಪೋಸ್ಟರ್ ಹರಿದು ವಿರೋಧ 

ಬೆಳಗಾವಿಯಲ್ಲಿ  ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರ ಪ್ರದರ್ಶಿಸದಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ ಹಿಂದು ಪರ ಸಂಘಟನೆಗಳ ಕಾರ್ಯಕರ್ತರನ್ನ ವಶಕ್ಕೆ ಪಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ
 ನಗರದ  ಸ್ವರೂಪ ಚಿತ್ರಮಂದಿರ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ದಾಳಿ ಮಾಡಿ ಪಠಾಣ್ ಚಿತ್ರದ ಬ್ಯಾನರ್ ಗಳನ್ನು ಹರಿದು ಆಕ್ರೊಶ್ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು 30 ಜನ ಹಿಂದು ಪರ ಸಂಘಟನೆಗಳ‌ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಿಭಟನೆ ಹಿನ್ನಲೆಯಲ್ಲಿ ಸ್ವರೂಪ ಚಿತ್ರಮಂದಿರ ಬಳಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸಿಪಿಐ ನೇತೃತ್ವದಲ್ಲಿ ಕೆಎಸ್ಆರ್ಪಿ ಪೊಲೀಸರು ತುಕಡಿ‌ ನಿಯೋಜನೆ ಮಾಡಲಾಗಿದೆ.
 
ಇದೆ ವೇಳೆ ಬೆಳಗಾವಿ ದಕ್ಷಿಣ ಕ್ಷೇತ್ರದ  ಶಾಸಕ ಅಭಯ ಪಾಟೀಲ್ ಹಿಂದುಪರ ಸಂಘಟನೆಗಳು ಈ‌ ಮೊದ್ಲೇ ಈ ಚಿತ್ರವನ್ನು ಬಾಯ್ಕಾಟ್ ಮಾಡುತ್ತೆವೆ ಅಂತಾ ಪ್ರತಿಭಟನೆ ಮಾಡಿದ್ದರು. ಇದ್ನ ಚಿತ್ರಮಂದಿರ ಮಾಲೀಕರು ಅರ್ಥ ಮಾಡಿಕೊಂಡು ಸ್ವಯಂ ಪ್ರೇರಿತರಾಗಿ ಚಿತ್ರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
TV24 News Desk
the authorTV24 News Desk

Leave a Reply