ರಾಜ್ಯ

ಐಎಎಸ್ VS ಐಪಿಎಸ್ ವಾರ್ ಈಗ ವಿಧಾನಸೌಧದ ಅಂಗಳದಲ್ಲಿ

ಬೆಂಗಳೂರು : ಐಜಿಪಿ ಡಿ. ರೂಪ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸೀಂಧೂರಿ ಅವರ ನಡುವೆ ನಡೆಯುತ್ತಿರುವ ಜಗಳದ ಕುರಿತು ರೋಹಿಣಿ ಸಿಂಧೂರಿ ಅವರು ಇಂದು ಬೆಳಗ್ಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದರು. ಇದರ ಬೆನ್ಲಲ್ಲೇ ಐಜಿಪಿ ಡಿ.ರೂಪ‌ ಅವರಿಂದಲೂ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಲಾಗಿದೆ.
ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ ಐಜಿಪಿ ಡಿ. ರೂಪಾ ಮೌದ್ಗಿಲ್‌ ಕೂಡ ದೂರು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು ರೋಹಿಣಿ ಸಿಂಧೂರಿ ಕೆಲ ಐಎಎಸ್‌ ಅಧಿಕಾರಿಗಳಿಗೆ ಫೋಟೋಗಳನ್ನು ಕಳುಹಿಸಿದ ಬಗ್ಗೆ ಯಾವುದೇ ಸಂಸ್ಥೆ ತನಿಖೆ ಮಾಡಿದರೆ ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಕೊಡುತ್ತೇನೆ ಎಂದು ಡಿ. ರೂಪಾ ತಿಳಿಸಿದ್ದಾರೆ. 
 
ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಪ್ರಕರಣ ತನಿಖೆಗೆ ಡಿ.ರೂಪ ಆಗ್ರಹ ಮಾಡುತ್ತಿದ್ದಾರೆ. ಈಗಾಗಲೇ ಲೋಕಾಯುಕ್ತದಲ್ಲಿ ಇರುವ ಪ್ರಕರಣದ ತನಿಖೆ ಚುರುಕುಗೊಳಿಸಲು ಮನವಿ ಮಾಡಲಾಗುವುದು. ಮೈಸೂರು ಜಿಲ್ಲಾಧಿಕಾರಿ ಆಗಿದ್ದಾಗ ಸ್ವಿಮ್ಮಿಂಗ್ ಪೂಲ್‌ ನಿರ್ಮಾಣ ಮಾಡಲಾಗಿತ್ತು. ಡಾ.ರವಿಶಂಕರ್ ವರದಿ ಆಧರಿಸಿ ರೋಹಿಣಿ ವಿರುದ್ದ ಕ್ರಮಕ್ಕೆ‌ ಆಗ್ರಹಿಸಿದ್ದಾರೆ. ಪ್ರಾಥಮಿಕ ವರದಿಯಲ್ಲಿ ರೋಹಿಣಿ ಸಿಂಧೂರಿ ಅವರ ತಪ್ಪು ಸಾಬೀತಾಗಿದೆ. ಆದರೂ ಅವರ ವಿರುದ್ಧ ಯಾವುದೇ ಕ್ರಗಳನ್ನು ಕೈಗೊಂಡಿಲ್ಲ ಎಮದು ಆರೋಪಿಸಿದ್ದಾರೆ. 
 
ಮನೆ‌ ನಿರ್ಮಾದ ಬಗ್ಗೆ ಇಮ್ಮೂವಬೆಲ್ ಪ್ರಾಪರ್ಟಿ ರಿಟನ್ ಫೈಲ್‌ನಲ್ಲಿ ಉಲ್ಲೇಖಿಸಿಲ್ಲ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಕ್ರಮ‌ಆಸ್ತಿ ಗಳಿಕೆ ಆರೋಪದ ಅಡಿ ತನಿಖೆ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಜಾಲಹಳ್ಳಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗೆ ಸುಮಾರು 2 ಕೋಟಿ ರೂ. ಮೌಲ್ಯದ ಪೀಠೋಪಕರಣಗಳನ್ನು ಇಟಲಿಯಿಂದ ತರಿಸಿಕೊಳ್ಳಲಾಗಿದೆ. ಬಾಗಿಲಿನ ಹಿಂಜಸ್‌ ಒಂದಕ್ಕೇ ಬರೋಬ್ಬರು 6 ಲಕ್ಷ ರೂ. ವೆಚ್ಚ ಮಾಡಲಾಗಿದೆ. ರೋಹಿಣಿ ಸಂಧೂರಿ ಅವರು ನೀಡಿದ ದೂರಿನಲ್ಲಿ 26 ಲಕ್ಷ ಜರ್ಮನ್‌ ಅಪ್ಲೈಯನ್ಸಸ್‌ ಬಳಸಿದ್ದಾರೆ. ಅವರದ್ದಲ್ಲದ ಮನೆಗೆ ಅವರು ಯಾಕೆ ಇಷ್ಟೊಂದು ಯಾಕೆ ಖರ್ಚು ಮಾಡುತ್ತಾರೆ. ಈ ಬಗ್ಗೆ ಸಾಕ್ಷಿ ಸಮೇತ ದೂರು ನೀಡಲಾಗುತ್ತದೆ ಎಂದರು.
TV24 News Desk
the authorTV24 News Desk

Leave a Reply