ಬೆಳಗಾವಿ: ಕಾಗವಾಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಒಳಪಡುವ ಕಡವಾಡ, ಶೇಡಬಾಳ, ಶೀರಗುಪ್ಪಿ, ಮೋಳೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಳೆದ ಒಂದು ವರ್ಷದಿಂದ ರೈತರು ತಮ್ಮ ಜಮೀನಗಳಲ್ಲಿನ ಬಾವಿ ಹಾಗೂ ನದಿ ನೀರಾವರಿ ಯೋಜನೆಗಳಿಗೆ ಜೋಡಿಸಿದ ನೀರೆತ್ತುವ ಪಂಪ ಸೆಟ್, ಮೋಟಾರಗಳು ಸದಿಲ್ಲದೇ ಅಕ್ರಮವಾಗಿ ಕಳ್ಳತನವಾಗುತ್ತಿದ್ದು ಇದು ರೈತರಿಗೆ ಮತ್ತು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದರಿಂದ ಅಥಣಿ ಹಾಗೂ ಕಾಗವಾಡ ಪೊಲೀಸ್ ಠಾಣೆಯ ಡಿಎಸ್ಪಿ ಮತ್ತು ಸಿಪಿಐ ರವರ ನೇತೃತ್ವದಲ್ಲಿ ಕುಖ್ಯಾತ ಆರೋಪಿಗಳನ್ನು ಬಂದಿಸಿ ಪ್ರಕರಣವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖಾ ತಂಡದ ಕಾರ್ಯಚರಣೆಯಿಂದ ಫೆ.20 ರಂದು ಸದರಿ ಪ್ರಕರಣಕ್ಕೆ ಸಂಭಂದಿಸಿದಂತೆ 03 ಜನ ಸಾಂಗಲಿ ಮೂಲದ ಅಂತರ ರಾಜ್ಯ ನೀರೆತ್ತುವ ಪಂಪ ಸೆಟ್. ಮೋಟಾರಗಳು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಸುಮಾರು 7 ಲಕ್ಷದ ಮೌಲ್ಯದ 36 ನೀರೆತ್ತುವ ಪಂಪ ಸೆಟ್. ಮೋಟಾರಗಳು ಮತ್ತು ಸುಮಾರು 1,97 ಸಾವಿರ ಮೌಲ್ಯದ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ ಮತ್ತು ಗೂಡ್ಡ ವಾಹನಗಳನ್ನು ಹೀಗೆ 8,97 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡಿಯಲಾಗಿದೆ ಎಂದರು.
ಸದರಿ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಅಥಣಿ ವಿಭಾಗದ ಎಸ್ ಡಿ ಜಲ್ಲೆಯ ಡಿಎಸ್ಪಿ. ರವೀಂದ್ರ ನಾಯ್ಕ ಸಿಪಿಐ ಅಥಣಿ ತನಿಖಾಧಿಕಾರಿಗಳಾ ಎಚ್. ಕೆ ನರಳೆ ಪಿಎಸ್ಐ ಕಾಗವಾಡ, ನಾಯ್ಕ ಪಿಎಸ್ಐ, ಕಾಗವಾಡ ಠಾಣೆ ರವರು, ಹಾಗೂ ಸಿಬ್ಬಂದಿರವರಾದ ಬಿ ಎಮ್ ರಿಜಕನ್ನವರ, ಎಎಸ್ಐ, ಶ್ರೀ ಜೆ ಎ ಸೊನಾವನೆ ಎಎಸ್ಐ ಶ್ರೀ ಆರ್ ಎಸ್ ಬಸ್ತವಾಡ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಹಾಗೂ ಬೆಳಗಾವಿ ಟೇಕ್ನಿಕಲ್ ಸೆಲ್ ವಿನೋದ ಟಕ್ಕನ್ನವರ, ಮುಂತಾದವರು ಪಾಲ್ಗೊಂಡಿದ್ದರು. ಇವಕ ಕಾರ್ಯಕ್ಕೆ ಜಿಲ್ಲಾ ವರಿಷ್ಠಾಧಿಕರಿಯಾದ ಡಾ, ಸಂಜೀವ್ ಪಾಟೀಲ ಅವರು ಪ್ರಶಂಸೆ ವ್ಯಕ್ತಪಡಿಸಿದರು.