ರಾಜ್ಯ

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೆ ಮಾತ್ರ ಉಳಿಗಾಲವಂತೆ

ಮಂಡ್ಯ :ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯಲ್ಲಿರುವ ಚಿಕ್ಕಮ್ಮ ತಾಯಿ ದೇವಾಲಯಕ್ಕೆ ಯತೀಂದ್ರ ಸಿದ್ರಾಮಯ್ಯ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು  ಇದೆ ವೇಳೆ ದೇಗುಲದ ಅರ್ಚಕ ಲಿಂಗಣ್ಣನ ಮೇಲೆ ಆವಾಹನೆಯಾಗಿದ್ದ ಶಕ್ತಿ ದೇವತೆ, ಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ದೇವಿ ಸೂಚನೆ‌ ನೀಡಿದೆ.
ಯತೀಂದ್ರ ಸಿದ್ದರಾಮಯ್ಯ ಅವರು ಮಾಜಿ ಸಚಿವ ನರೇಂದ್ರಸ್ವಾಮಿ ಜೊತೆ ಮನೆ ದೇವರ ಪೂಜೆಗೆ ಸಲ್ಲಿಸಲು ಬಂದಿದ್ದ ವೇಳೆ ದೇವಿ ಭವಿಷ್ಯ ನುಡಿದಿದೆ. ಕಳೆದ ಬಾರಿಯ ಚುನಾವಣೆ ವೇಳೆ ಕೂಡ ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಇದೇ ಶಕ್ತಿದೇವತೆ ಭವಿಷ್ಯ ನುಡಿತ್ತು. ಮನೆ ದೇವರ ಆದೇಶದಂತೆ ಎಂಬಂತೆ ಸಿದ್ದರಾಮಯ್ಯ ಅವರು ಈ ಬಾರಿಯೂ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರಾ ಎಂಬುದು  ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. 
TV24 News Desk
the authorTV24 News Desk

Leave a Reply