Uncategorized

ಬೆಳಗಾವಿ ಪತ್ರಕರ್ತರ ವಿಮೆ ಸೌಲಭ್ಯ ನವೀಕರಣಕ್ಕೆ ಆಗ್ರಹ- ನಿಯೋಗದಿಂದ ಒತ್ತಾಯ!

ಬೆಳಗಾವಿ:

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಿಂದ ಪತ್ರಕರ್ತರಿಗೆ ನೀಡಲಾಗುತ್ತಿರುವ ವಿಮಾ ಸೌಲಭ್ಯವನ್ನು ಶೀಘ್ರದಲ್ಲೇ ನವೀಕರಿಸುವಂತೆ ಒತ್ತಾಯಿಸಲಾಯಿತು. ಇಂದು ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್, ಮೇಯರ್ ಪ್ರೀತಿ ಕಾಮಕರ್ ಹಾಗೂ ಮಹಾನಗರಪಾಲಿಕೆ ಆಯುಕ್ತ ಎಂ. ಕಾರ್ತಿಕ್ ಅವರನ್ನು ಭೇಟಿ ಮಾಡಿದ ನಿಯೋಗವು, ಪತ್ರಕರ್ತರ ವಿಮಾ ಸೌಲಭ್ಯವನ್ನು ತಕ್ಷಣ ನವೀಕರಿಸಿ, ಈ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಸುಗಂಧಿ, ಗೌರವಾಧ್ಯಕ್ಷ ಶ್ರೀಕಾಂತ್ ಕುಬಕಡ್ಡಿ, ಉಪಾಧ್ಯಕ್ಷರು ಚಂದ್ರು ಶ್ರೀರಾಮುಡು ಮಂಜುನಾಥ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶ್ರೀಧರ, ಸಹ ಕಾರ್ಯದರ್ಶಿ ಅಡಿವೇಶ ಪಾಟೀಲ ಖಜಾಂಚಿ ಸಹದೇವ ಮಾನೆ, ಅನಿಲ್ ಕಾಜಗಾರ, ಮೈಲಾರಿ ಪಟಾತ್, ಮಂಜುನಾಥ ರೆಡ್ಡಿ, ಮಂಜುನಾಥ ಹುಡೇದ್, ಸಿದ್ದನಗೌಡ, ರಾಜೇಶ್, ಸುಭಾನಿ ಮುಲ್ಲಾ, ಸುನಿಲ್, , ಪ್ರವೀಣ, ರವಿ ನಾಗೇಶ, ಪ್ರಲ್ಹಾದ್, ಅಶೋಕ, ನಜೀಮ್, ಮಹಾಂತೇಶ, ಶಿವು ಹಾಗೂ ವಿನೋದ ಸೇರಿ ಅನೇಕರು ಇದ್ದರು

TV24 News Desk
the authorTV24 News Desk

Leave a Reply