ಬೆಳಗಾವಿಬೆಳಗಾವಿ ನಗರ

ವಿವೇಕದ ನುಡಿಗಳನ್ನು ವಿದ್ಯಾರ್ಥಿಗಳು ಅನುಸರಿಸಬೇಕು ಮುರಗೇಂದ್ರಗೌಡ ಪಾಟೀಲ

ಬೆಳಗಾವಿ: ನಗರದ ಗೋಂದಳಿಗಲ್ಲಿಯಲ್ಲಿ  ಸ್ವಾಮಿ ವಿವೇಕಾನಂದ ರಿಕ್ಷಾ ಸ್ಟ್ಯಾಂಡ ಅವರು ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಜ ಮಾತಾ ಜೀಜಾವು ಜಯಂತಿಯಲ್ಲಿ  ಭಾಗವಹಿಸಿ ಪೂಜೆ ಸಲ್ಲಿಸಿದ ಅವರು  ಬಿಜೆಪಿ ಮುಖಂಡ ಮುರಗೇಂದ್ರಗೌಡ ಪಾಟೀಲ ಅವರು ಸ್ವಾಮಿ ವಿವೇಕಾನಂದರು ಹೇಳಿರುವ ವಿವೇಕದ ನುಡಿಗಳನ್ನು ವಿದ್ಯಾರ್ಥಿಗಳು ಅನುಸರಿಸಿದರೆ ಅವರು ಶೈಕ್ಷಣಿಕವಾಗಿ ಅದ್ಭುತ ಯಶಸ್ಸು ಗಳಿಸಬಲ್ಲರು. ವೃತ್ತಿಜೀವನದಲ್ಲಿರುವವರು ಅನುಸರಿಸಿದರೆ  ಅವರ ಕಾರ್ಯ  ಪ್ರಗತಿ ಅದ್ಭುತವಾಗಬಹುದು. ವ್ಯಕ್ತಿತ್ವ ವಿಕಸನ ಬಯಸುವವರೂ ವಿವೇಕವಾಣಿಯಿಂದ ಸ್ಫೂರ್ತಿ ಹೊಂದಬಹುದು ಎಂದು ಹೇಳಿದರು. ಈ ಸಂದಭದಲ್ಲಿ ಆಟೋ ಚಾಲಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು..
TV24 News Desk
the authorTV24 News Desk

Leave a Reply