ಹುಬ್ಬಳ್ಳಿ: ಇಂಡಿಗೋ ವಿಮಾನ ಶ್ರೇಣಿ II ಹುಬ್ಬಳ್ಳಿಯಿಂದ ನೇರವಾಗಿ ಸಂಪರ್ಕಿಸುವ ಮೊದಲ ಪ್ಲೈಟನ್ನು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಉದ್ಘಾಟಿಸಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದವ್ರೇ ಆದ ಫಸ್ಟ್ ಆಫೀಸರ್ ಅಕ್ಷಯ್ ಪಾಟೀಲ್ ತನ್ನ ಪರಿಚಯವನ್ನು ಉತ್ತರ ಕರ್ನಾಟಕದ ಶೈಲಿಯಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಶುಭಾಶಯ ಕೋರಿದರು ಹಾಗೂ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಧನ್ಯವಾದ ಅರ್ಪಿಸಿದರು. ಅವರು ಹಾರಾಟದ ಅವಧಿ, ಕ್ರಮಿಸಬೇಕಾದ ದೂರ ಮತ್ತು ಎತ್ತರದ ವಿವರಗಳನ್ನು ಕನ್ನಡದಲ್ಲಿ ಹೇಳಿದರು.ಇಡೀ ಭಾಷಣವು ಉತ್ತರಕರ್ನಾಟಕದಲ್ಲಿ ಮಾತನಾಡುವ ಮೂಲಕ ಪ್ರಯಾಣಿಕರ ಗಮನ ಸೆಳೆಯುವದು ವಿಶೇಷವಾಗಿತ್ತು.
ಈ ಕುರಿತು ಸಂತೋಷಪಟ್ಟು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವೆಯ ಶುರುವಾಗಿದೆ. ವಿಶೇಷವೆಂದರೆ ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ವಿಮಾನದ ಘೋಷಣೆಯಾಗಿದೆ. “ನಮ್ಮವರೇ ಆದ ಅಕ್ಷಯ್ ಪಾಟೀಲ್ ಅವರು ಇಂದಿನ ವಿಮಾನದ ಪೈಲಟ್ ಆಗಿದ್ದರು, ಎಲ್ಲಾ ಪ್ರಯಾಣಿಕರನ್ನು ಸ್ವಚ್ಛ (ಶುದ್ಧ) ಉತ್ತರಕರ್ನಾಟಕ ಭಾಷೆಯಲ್ಲಿ ಸ್ವಾಗತಿಸಿದರು ಮತ್ತು ನಮ್ಮನ್ನು ರಾಷ್ಟ್ರ ರಾಜಧಾನಿಗೆ ಹಾರಿಸಿದರು. ಇದಕ್ಕಿಂತ ಸಂತೋಷದ ಸಂಗತಿ ಏನಿದೆ ಹೇಳಿ…ನಮ್ಮ ಭಾಷೆ, ಸಂಸ್ಕೃತಿ ಅಖಂಡವಾಗಿ ಉಳಿದರೆ ಮಾತ್ರ ಪ್ರಗತಿ ಸಾಧ್ಯ, ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್ ಅನೌನ್ಸ್ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದ ವಿಶೇಷ. ನಮ್ಮ ಬೈಲಹೊಂಗಲದವ್ರೇ ಆದ ಅಕ್ಷಯ್ ಪಾಟೀಲ್ ಇವತ್ತಿನ ವಿಮಾನದ ಪೈಲೆಟ್ ಆಗಿದ್ರಿಂದ ಸ್ವಚ್ಛ ಉತ್ತರ ಕರ್ನಾಟಕ ಭಾಷಾದಾಗ ಎಲ್ಲಾ ಪ್ರಯಾಣೀಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋದ್ರು. ಇದರಕಿಂತ ಹೆಚ್ಚಿನ ಖುಷಿ ಏನ ಬೇಕ ಹೇಳ್ರಿ… ನಮ್ಮ ಭಾಷೆ ಉಳಿಬೇಕು ಮತ್ತ ಸಂಸ್ಕೃತಿ ಪಕ್ಕಾ ಪ್ರಗತಿ ಆಗೇ ಆಗ್ತೈತಿ ಎಂದು ಟ್ವಿಟ್ ಮಾಡಿ ಖುಷಿಪಟ್ಟದ್ದಾರೆ.