ಬೆಳಗಾವಿ:
ಅಧಿಕಾರ ದುರ್ಬಳಕೆ ಮಾಡಿಕೊಂಡು ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಯಾಗಿದೆ.ಮಗಾನಗರ ಪಾಲಿಕೆಯ ಸಧ್ಯದ ಹಾಲಿ ಮೇಯರ್ ಹಾಗೂ ಓರ್ವ ಸದಸ್ಯನ ಸದಸ್ಯತ್ವ
ಅನರ್ಹತೆ ಖಾಯಂ ಮಾಡಿ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ನಗರದ ತಿನಿಸು ಕಟ್ಟೆಯಲ್ಲಿ ಪತ್ನಿಯರ ಹೆಸರಿನ ಮೇಲೆ ಮಳಿಗೆ ಪಡೆದ ಆರೋಪವನ್ನು ಇಬ್ಬರು ಕಾರ್ಪೋರೇಟರ್ಸ್ ಎದುರಿಸುತ್ತಿದ್ದರು.ಬೆಳಗಾವಿ ದಕ್ಷಿಣ ಕ್ಷೇತ್ರದ ಇಬ್ಬರು ಕಾರ್ಪೋರೇಟರಗಳಾದ
ವಾರ್ಡ್ ನಂ41 ರ ಸದಸ್ಯ ಮಂಗೇಶ ಪವಾರ್ ಹಾಗೂ 23 ರ ಸದಸ್ಯ ಜಯಂತ್ ಜಾಧವ್ ಮೇಲಿದ್ದ ಆರೋಪ ಬಂದಿತ್ತು.
ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರ ಕುರಿತು ಸಾಮಾಜಿಕ ಹೋರಾಟಗಾರ ಸುಜೀತ್ ಮುಳುಗುಂದ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು.ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ ನಂತರ ಮುಳುಗುಂದ ದೂರು ಆಧರಿಸಿ ಸುಧೀರ್ಘ ವಿಚಾರಣೆ ನಡೆಸಿ ಸದಸ್ಯತ್ವ ರದ್ದು ಮಾಡಿ
ಪ್ರಾದೇಶಿಕ ಆಯುಕ್ತ ಎಸ್ ಬಿ ಶೆಟ್ಟೆನ್ನವರ್ ಆದೇಶ ಹೊರಡಿಸಿದ್ದರು.ತಮ್ಮ ಸದಸ್ಯತ್ವ ರದ್ದತಿಯ ಆದೇಶದ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಮೇಲ್ಮನವಿಯನ್ನು ಇಬ್ಬರು ಮಹಾನಗರ ಪಾಲಿಕೆ ಸದಸ್ಯರು ಸಲ್ಲಿಸಿದ್ದರು.ಈ ಮಧ್ಯೆ ಇಬ್ಬರು ಸದಸ್ಯರು ತಮ್ಮ ಸದಸ್ಯತ್ವ ರದ್ದತಿ ಖಂಡಿಸಿ ಹೈ ಕೋರ್ಟ್ ಮೊರೆ ಹೋಗಿದ್ದರು ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ನಗರಾಭಿವದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ವಿಚಾರಣೆ ನಡೆಸಿ ಈ ಇಬ್ಬರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.ಅಲ್ಲದೆ ವಾರ್ಡ್ ನಂಬರ್ 41 ಮತ್ತು ಮತ್ತು 23 ಎರಡೂ ಸದಸ್ಯತ್ವ ಸ್ಥಾನಗಳು ತೆರವಾಗಿವೆ ಎಂದು ಘೋಷಿಸಿದ್ದಾರೆ.
