ಬೆಳಗಾವಿ: ಲಕ್ಷಾಂತರ ಮಾಜಿ ಸೈನಿಕರ ಸಮಸ್ಯೆ ಈಡೇರಿಸಲು ಸರ್ಕಾರ ನಿಮ್ಮ ಕಡೆ ತಿರುಗುತ್ತದೆ. ಶಾಂತಿಯುತ ಹೋರಾಟ ಮಾಡಿ, ನಿಮ್ಮ ಜೊತೆ ನಾವು ಸದಾಕಾಲ ಇರುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ರವಿವಾರ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು 75 ವರ್ಷಗಳಲ್ಲಿ ನಮ್ಮ ಸರ್ಕಾರ ಹಿಡಿದು ಎಲ್ಲ ಸರ್ಕಾರಗಳು ಸೈನಿಕರನ್ನು ನಿರ್ಲಕ್ಷ್ಯ ಮಾಡಿವೆ. ಈಗಾಗಲೇ ಸೈನಿಕರಿಗೆ ಮೀಸಲಾತಿ ಇದೆ. ಆದರೆ ಅದನ್ನು ಜಾರಿಗೆ ತರಲು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿಲ್ಲ. ಸಂಘ ಈಗ ಆರಂಭವಾಗಿ ಎರಡು ವರ್ಷ ಆಗಿದೆ. ಇನ್ನು ಧೀರ್ಘ ಹೋರಾಟ ಮಾಡಬೇಕಿದೆ. ಶಿಸ್ತು ಮತ್ತು ಸಮಯಕ್ಕೆ ಬಹಳ ಪ್ರಾಮುಖ್ಯತೆ ಕೊಡುವ ಜಾತಿ ಸೈನಿಕ ಜಾತಿ. ಯಾವುದೇ ಕ್ಷೇತ್ರದಲ್ಲಿ ವಿಷಯ ತಿಳಿಯಲು ನನಗೆ ಬಹಳ ಆಸಕ್ತಿಯಿದೆ.
ನಿಮ್ಮ ಸಮಸ್ಯೆ ಬಗೆಹರಿಸಲು ಎಲ್ಲ ಪಕ್ಷಗಳು ಕೂಡಿಕೊಂಡು ಪಕ್ಷಾತೀತವಾಗಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ. ಉಳ್ಳಾಗಡ್ಡಿ ಮತ್ತು ಮೊದಗಾದಲ್ಲಿ ಸೇನಾ ತರಬೇತಿ ಕೇಂದ್ರ ಆರಂಭಿಸಿದ್ದು
ಸೈನ್ಯಕ್ಕೆ ಸೇರುವ ಯುವಕರಿಗೆ ನಮ್ಮ ಫೌಂಡೇಶನ ವತಿಯಿಂದ ತರಬೇತಿ ನೀಡುತ್ತಿದ್ದೇವೆ. ರಾಜಕೀಯ ಹೊರತು ಪಡಿಸಿ ಇನ್ನಿತರ ಚಟುವಟಿಕೆ ಮೂಲಕೂ ನಾವು ಸಮಾಜಸೇವೆ ಮಾಡುತ್ತಿದ್ದೇವೆ ಎಂದರು.
tv24plus.in > Blog > ಜಿಲ್ಲೆ > ಬೆಳಗಾವಿ > ಮಾಜಿ ಸೈನಿಕರ ಬೆಳಗಾವಿ ಜಿಲ್ಲಾ ಘಟಕ ಸತೀಶ ಜಾರಕಿಹೊಳಿ ಉದ್ಘಾಟನೆ