ಬೆಳಗಾವಿ

ಬಿಜೆಪಿಯನ್ನು ಗೆಲ್ಲಿಸಲು ರಮೇಶ ಜಾರಕಿಹೊಳಿ ಮಾಸ್ಟರ್ ಪ್ಲ್ಯಾನ್ 

ಬೆಳಗಾವಿ:ಪಕ್ಷ ಸಂಘಟನೆಗಾಗಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಶನಿವಾರ ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ವಿಜಯ ನಗರದಲ್ಲಿ ಜನಸಂಪರ್ಕ ಕಚೇರಿ ಉದ್ಘಾಟನೆ ಮಾಡಿ ಬಹಿರಂಗ ಭಾಷಣ ಮಾಡಿರುವ ಅವರು, ಸಚಿವ ಸ್ಥಾನ ಸಿಗುವುದು, ಬಿಡುವುದು ಬೇರೆ ವಿಚಾರ. ವಿಶೇಷವಾಗಿ ಬೆಳಗಾವಿ ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.ಈಗ ಇದ್ದ ಶಾಸಕರಿಗೆ ಕಳೆದ ಬಾರಿ ಚುನಾವಣೆಯಲ್ಲಿ ಶಾಸಕರಾಗಿಸಲು ಎಷ್ಟು ಪ್ರಯತ್ನ ಮಾಡಿದ್ದೆವೆ ನಮಗೆ ಗೊತ್ತು, ಆದ್ರೆ ಆರಿಸಿ ಬಂದ ಒಂದೇ ಗಂಟೆಯ ಬಳಿಕ ಎಲ್ಲರ ತಲೆ ಮೇಲೆ ಕುಳಿತರು, ಕುಳಿತುಕೊಳ್ಳಲಿ ಪಾಪ ಪರವಾಗಿಲ್ಲ, ಇನ್ನೂ ಏನೋ ದೊಡ್ಡದಾಗೋ ಆಕಾಂಕ್ಷಿ ಆಗೋದಾದ್ರೆ ಆಗಲಿ, ಯಾರಿಗೂ ಕೆಟ್ಟ ಬಯಸೋದು ಬೇಡ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಗೆ ಟಾಂಗ ಕೊಟ್ಟಿದ್ದಾರೆ
ಜನಸಾಮಾನ್ಯರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು, ಹಣದಿಂದ ಚುನಾವಣೆ ಗೆಲ್ಲುತ್ತೇನೆ ಎಂದರೆ ಆಗುವುದಿಲ್ಲ ಎಂದ ಅವರು, ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸಂಜಯ ಪಾಟೀಲ ಸೋತಿದ್ದರು. ಈ ಬಾರಿ ಚುನಾವಣೆಯಲ್ಲಿ ನನ್ನ ಶಕ್ತಿ ತೋರಿಸುತ್ತೇನೆ. ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದು ಅವರು ಹೇಳಿದರು.
, . 
TV24 News Desk
the authorTV24 News Desk

Leave a Reply