ರಾಜ್ಯ

“ಕೈ” ಗ್ಯಾರಂಟಿಗಳು‌ ಜನರಿಗೆ ಮಕ್ಮಲ್ ಟೋಪಿ: HDK ವ್ಯಂಗ್ಯ..!

ಬೆಂಗಳೂರು: ಹಾಗೋ ಹೀಗೂ 15 ದಿನಗಳ ಬಳಿಕ ರಾಜ್ಯ ಕಾಂಗ್ರೆಸ್ ಪಕ್ಷ ಚುನಾವಣಾ ಮುನ್ನ ಹೇಳಿದ್ದ 5 ಗ್ಯಾರಂಟಿಗಳನ್ನ ಕೆಲ ಕಾಲಮಿತಿ ಮತ್ತು‌ ಷರತ್ತುಗಳನ್ನು ಹಾಕಿ 5 ಗ್ಯಾರಂಟಿಗಳನ್ನು ಸಿಎಮ್ ‌ಸಿದ್ದು ಜಾರಿಗೆ ತಂದಿದ್ದಾರೆ.‌ ಸರಕಾರ ರಚನೆ ಬಳಿಕ ರಾಜ್ಯದ ಜನರು ಸೇರಿದಂತೆ ವಿಪಕ್ಷಗಳು ನಿಮ್ಮ “ಗ್ಯಾರಂಟಿ” ಯಾವಾಗ ಎಂದು ಕಾಂಗ್ರೆಸ್ ಪಕ್ಷವನ್ನು ‌ಪ್ರತಿನಿತ್ಯ ತಿವಿಯುತ್ತಿದ್ದವು.
ಆದರೆ ಕಾಂಗ್ರೆಸ್ ನಮ್ಮ ಸರಕಾರ ನುಡಿದಂತೆ‌ ನಡೆಯುವ ಸರಕಾರ ಎಂದು ಹೇಳಿ ಇದೀಗ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಆದರೆ ಜಾರಿಗೆ ಕುರಿತು ವಿಪಕ್ಷಗಳು ಅಪಸ್ವರ ಎತ್ತಿದ್ದು, ಮಾಜಿ‌ ಸಿಎಮ್‌  HD ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಹೆಸರಲ್ಲಿ ರಾಜ್ಯದ ಜನತೆಗೆ ಮಹಾಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯದ ಜನತೆಗೆ ಇದರ ಒಳಮರ್ಮ ಅರ್ಥವಾಗಲು ಬಹಳ ದಿನ ಬೇಕಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಅವರು, ಷರತ್ತು ಸಹಿತವಾಗಿ ಘೋಷಣೆ ಮಾಡಲಾಗಿರುವ ಐದು ಗ್ಯಾರಂಟಿಗಳ ಬಗ್ಗೆ ಈಗಾಗಲೇ ಜನರಿಗೆ ಒಂದು ನಿರ್ದಿಷ್ಟಅಭಿಪ್ರಾಯ ಬಂದಿದೆ ಎಂದು ಹೇಳಿದ್ದಾರೆ.
ಹರುಷದ ಕೂಳಿಗೆ ಆಸೆಪಟ್ಟು ವರುಷದ ಕೂಳು ಕಳೆದುಕೊಂಡರು ಎನ್ನುವ ಮಾತನ್ನು ಹೇಳಲಾರೆ. ಆದರೆ, ರಾಜ್ಯದ ಜನತೆಗೆ ಇದರ ಅನುಭವಾಗಲು ಬಹಳ ದಿನ ಬೇಕಿಲ್ಲ ಎಂದಿದ್ದಾರೆ. ಈ ಗ್ಯಾರಂಟಿಗಳ ಬಗ್ಗೆ ಚರ್ಚೆ ಅಥವಾ ವಿಮರ್ಶೆಗೆ ನನಗೆ ಆತುರವಿಲ್ಲ. ನನಗೆ ತಾಳ್ಮೆ ಇದೆ. ಆದರೆ, ಮತ ಗಳಿಕೆಗೆ ಮುನ್ನ ಕೊಟ್ಟ ಭರವಸೆಗಳು ಅಧಿಕಾರಕ್ಕೆ ಬಂದ ಮೇಲೆ ‘ಷರತ್ತು ಸಹಿತ’ ಎಂದಿದ್ದರ ಬಗ್ಗೆ ನನಗೆ ನೋವಿದೆ.
ಕಾಲ ಸರಿದಂತೆ ಈ‌ ಗ್ಯಾರಂಟಿಗಳು ಅಸಲಿ ಬಣ್ಣ  ಜನರಿಗೆ ಗೊತ್ತಾಗಿ ಅವರ ಸಹನೆಯ ಕಟ್ಟೆಯೊಡೆಯುತ್ತದೆ. ಅಲ್ಲಿಯವರೆಗೂ ನಾನು ಕಾಯುತ್ತೇನೆ ಮತ್ತು ಅವರ ಜತೆ ನಿಲ್ಲುತ್ತೇನೆ ಎಂದಿದ್ದಾರೆ.
ಇದೇ, ಸಿದ್ದರಾಮಯ್ಯ ಅವರು 2013-18ರಲ್ಲಿ ತಮ್ಮ ಆಡಳಿತಾವಧಿಯಲ್ಲಿ 2.75 ಲಕ್ಷದಷ್ಟು ಸರ್ಕಾರಿ ಹುದ್ದೆಗಳನ್ನು ಖಾಲಿ ಇಟ್ಟಿದ್ದರು. ಆ ಖಾಲಿ ಹುದ್ದೆಗಳನ್ನು ತುಂಬಲು ಅವರು ಆ ಸಂದರ್ಭದಲ್ಲಿ ಎಳ್ಳಷ್ಟೂ ಪ್ರಯತ್ನ ಮಾಡಲಿಲ್ಲ. ಅಂದು ಕಾಣದ ನಿರುದ್ಯೋಗ ಈ ಚುನಾವಣೆಗೆ ಮುನ್ನ ಕಂಡಿತಾ..!? ಎಂದು ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದದಿದ್ದಾರೆ.
ಈಗ ನಿರುದ್ಯೋಗ ನೆಪದಲ್ಲಿ ಯುವಕರಿಗೆ ಟೋಪಿ ಹಾಕಿದ ಈ ‘ನಕಲಿ ಗ್ಯಾರಂಟಿ’ಗೆ ಮುಂದಿನ ದಿನಗಳಲ್ಲಿ ಯುವಕರಿಂದ ಶಾಸ್ತಿಯಾಗುವ ಕಾಲ ದೂರವಿಲ್ಲ ಎಂದಿದ್ದಾರೆ.
ನಾನು ತುಟಿಗೆ ತುಪ್ಪ ಸವರುವವರನ್ನು ನೋಡಿದ್ದೆ. ಆದರೆ  ಹಣೆಗೆ ತುಪ್ಪ ಸವರುವವರನ್ನು ನೋಡಿರಲಿಲ್ಲ. ಗ್ಯಾರಂಟಿ ಕಾರ್ಡ್‌ಗೆ ಸಹಿ ಹಾಕಿಕೊಟ್ಟು ಏಮಾರಿಸಿದ ಮಹಾನುಭಾವರು ಹಣೆಗೆ ತುಪ್ಪ ಸವರಿ ನಯಗಾರಿಕೆಯಿಂದ ಭಂಡತನ ಮೆರೆದು ಯುವಜನರ ಬೆನ್ನಿಗೆ ಚೂರಿ ಹಾಕಿದ್ದಾರೆ‌ ಎಂದು ಹೆಚ್ಡಿಕೆ ಕಾಂಗ್ರೆಸ್ ವಿರುದ್ದ ಟ್ವಿಟ್ ಮೂಲಕ ಲೇವಡಿ ಮಾಡಿದ್ದಾರೆ.
TV24 News Desk
the authorTV24 News Desk

Leave a Reply