ಬೆಳಗಾವಿ

ರಾಮದುರ್ಗದಲ್ಲಿ  ಸಿಎಂ ಬೊಮ್ಮಾಯಿ‌ ಕರವೇ ಮುಖಂಡರ ಜೊತೆ ಸಿಎಂ ಚರ್ಚೆ 

ಬೆಳಗಾವಿ: ಗಡಿ ವಿವಾದದ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೆಳಗಾವಿ ಜಿಲ್ಲಾ ಪ್ರವಾಸಕ್ಕೆ ಮಾಡುತ್ತಿರುವುದು  ಮಹಾರಾಷ್ಟ್ರ ಸರ್ಕಾರಕ್ಕೆ ಬಿಸಿ ಮುಟ್ಟಲಿದೆ
ರಾಮದುರ್ಗ ಪಟ್ಟಣದಲ್ಲಿ  ಡಾ.ಶ್ಯಾಮ ಪ್ರಸಾದ್ ಮುಖರ್ಜಿ ವೇದಿಕೆಯಲ್ಲಿ ಆಯೋಜನೆ ಮಾಡಿರುವ  ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಸಭೆಯ ನಂತರ ಕರವೇ ಮುಖಂಡರನ್ನು ಭೆಟ್ಟಿಯಾಗಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌.
ಕರವೇ ಮುಖಂಡರ ಜೊತೆ ಸಿಎಂ ಚರ್ಚೆ 
ಈ  ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಮಹಾದೇವ ತಳವಾರ ನೇತೃತ್ವದ ಕರವೇ ಮುಖಂಡರ ತಂಡ
ಬೆಳಗಾವಿ ಗಡಿವಿವಾದದ ಕುರಿತು, ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುತ್ತಿದ್ದು,  ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವಾಗ ಬೆಳಗಾವಿ ಎಂಇಎಸ್ ನಾಯಕರು ಮಹಾರಾಷ್ಟ್ರದ ಸಚಿವರನ್ನು ಬೆಳಗಾವಿಗೆ ಕರೆಸಿ ಶಾಂತಿಗೆ ಭಂಗ ತರುವ ಹುನ್ನಾರ ಮಾಡುತ್ತಿರುವುದು ದುರದುಷ್ಟಕರ ಈ ಎಲ್ಲ ವಿಷಯಗಳ  ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಜೊತೆ ಸಮಾಲೋಚನೆ ನಡೆಸಿ ಮನವಿ ಸಲ್ಲಿಸಲಿದ್ದಾರೆಂದು ತಿಳಿದು ಬಂದಿದೆ
TV24 News Desk
the authorTV24 News Desk

Leave a Reply