ಬೆಳಗಾವಿ

ಜೆಡಿಎಸ್ ಹೋಗ್ತಿವಿ, ಕಾಂಗ್ರೆಸ್‍ಗೆ ಹೋಗ್ತಿವಿ ಶತ ಸುಳ್ಳು ಜಾರಕಿಹೊಳಿ

ಮೂಡಲಗಿ:  ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಜಾರಕಿಹೊಳಿ ಮೂವರು ಸಹೋದರರು, ಇಂದು  ಕನಕದಾಸ ಜಯಂತಿ ಕಾರ್ಯಕ್ರಮದದಲ್ಲಿ   ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಹೋದರರು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ರಮೇಶ ಜಾರಕಿಹೊಳಿ, ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಪ್ರತ್ಯಕ್ಷವಾಗಿ ತಮ್ಮ ಒಗ್ಗಟ್ಟು ಪ್ರದರ್ಶನ ತೋರಿಸಿದ್ದಾರೆ .
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಒಗ್ಗಟ್ಟು ಸಹೋದರರಿಂದ ಒಗ್ಗಟ್ಟು ಪ್ರದರ್ಶನ ಬೆಳಗಾವಿ  ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರ್ತಾರೆ ಎಂಬ ಊಹಾಪೋಹ ಕೊನೆಗೂ ಮೌನ ಮುರಿದು ಮಾಧ್ಯಮಗಳೊಂದಿಗೆ ಮಾತನಾಡಿದ  ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ  ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಮ್ಮ ಬಗ್ಗೆ ಸುಳ್ಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಈ ಊಹಾಪೋಹವನ್ನು ಕ್ಲೀಯರ್ ಮಾಡುತ್ತೇನೆ.  2023ರ ಚುನವಣೆಯಲ್ಲಿ ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿ ನಾನೇ ಕಣಕ್ಕಿಳಿಯುವೆ ಬಿಜೆಪಿ ಬಿಟ್ಟು ನಾನು ಬೇರೆ ಯಾವ ಪಕ್ಷದಿಂದಲೂ ಸ್ಪರ್ಧಿಸುವುದಿಲ್ಲ, ರಮೇಶ ಜಾರಕಿಹೊಳಿ ಕೂಡ ಗೋಕಾಕ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿಯೇ ಸ್ಪರ್ಧಿಸಲಿದ್ದಾರೆ  ನಾವು ಜೆಡಿಎಸ್ ಹೋಗ್ತಿವಿ, ಕಾಂಗ್ರೆಸ್‍ಗೆ ಹೋಗ್ತಿವಿ ಎಂದು ನಮ್ಮ ರಾಜಕೀಯ ವೈರಿಗಳೇ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ನರೇಂದ್ರ ಮೋದಿ, ಅಮಿತ್ ಶಾ ಇರುವ ತನಕ ನಮ್ಮ ಪಕ್ಷವನ್ನು ಇನ್ನೂ 10 ವರ್ಷ ಅಳಗಾಡಿಸಲು ಆಗಲ್ಲ ನರೇಂದ್ರ ಮೋದಿ ಅವರು ಕೇಂದ್ರದಲ್ಲಿದ್ದಾರೆ, ನನಗೆ ಕೆಲಸ ಮಾಡುವುದು ಗೊತ್ತಿದೆ ಗುಜರಾತಿನಲ್ಲಿ ಬಿಜೆಪಿ 120 ಸ್ಥಾನ ಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ಲೇಷಿಸಿದರು.
ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಹೈಕಮಾಂಡ್ ನಾಯಕರ ಶ್ರಮದಿಂದ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ನಾವು ಅಧಿಕಾರದಲ್ಲಿ ಇದ್ದರೆ ನಿಮ್ಮೆಲ್ಲ ಕೆಲಸಗಳು ಆಗುತ್ತವೆ ಎಲ್ಲ ಜಾತಿಯವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಚುನಾವಣೆಯಲ್ಲಿ ಗೆಲ್ಲುತ್ತೇನೆ, ದ್ವೇಷ, ಸಿಟ್ಟಿನಿಂದ ಯಾರ ಮತವನ್ನೂ ನಾನು ಪಡೆಯಲ್ಲ ನಮ್ಮಿಂದ ದೂರ ಹೋದವರನ್ನೂ ಪ್ರೀತಿಯಿಂದ ಕರೆದು ವಿಶ್ವಾಸ ಗಳಿಸುತ್ತೇನೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಎಂದು ಹೇಳಿದರು
TV24 News Desk
the authorTV24 News Desk

Leave a Reply