ಬೆಳಗಾವಿ: ನೀವು ಮೂವರದ್ದು ದೊಡ್ಡ ಸಾಮ್ರಾಜ್ಯ ಇದೆ ಡ್ಯಾಮೇಜ ಮಾಡ್ಕೊಬೇಡಿ; ಬಾಲಚಂದರ್ ಜಾರಕಿಹೊಳಿ ಸಿಡಿ ಕೇಸ್ ಸಿಬಿಐಗೆ ವಹಿಸುವಂತೆ ರಮೇಶ್ ಜಾರಕಿಹೊಳಿ ಜಾರಕಿಹೊಳಿ ಆಗ್ರಹ ವಿಚಾರ ಕುರಿತು ಗೋಕಾಕನಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮದ ಮೂಲಕ ರಮೇಶ್ ಜಾರಕಿಹೊಳಿ, ಡಿಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ.ಮೂರು ತಿಂಗಳಲ್ಲಿ ಚುನಾವಣೆ ಇದೆ.ಈ ರೀತಿ ಸಿಡಿ ಪ್ರಕರಣ ಇಟ್ಟುಕೊಂಡು ಈ ರೀತಿ ಹೋದ್ರೇ ಮೂರು ಫ್ಯಾಮಿಲಿಗಳಿಗೆ ಡ್ಯಾಮೇಜ್ ಆಗುತ್ತೆ.ಎಲ್ಲಾ ದೊಡ್ಡ ದೊಡ್ಡ ಫ್ಯಾಮಿಲಿ ಇವೆ ದಯಮಾಡಿ ಈ ಕೇಸ್ ಮುಂದುವರೆಸಬೇಡಿ. ಎಂದು ಮನವಿ ಮಾಡಿದರು.
ನಾವು ರಾಜಕೀಯವಾಗಿ ಹೋರಾಟ ಮಾಡೋಣ. ಬಿಜೆಪಿಯಿಂದ ನಾವು ಕಾಂಗ್ರೆಸ್ ನಿಂದ ನೀವು ಮಾಡಿ.ಜನ ಯಾರ ಮೇಲೆ ಪ್ರೀತಿ ಇದಾರೆ ಅವರಿಗೆ ವೋಟ್ ಹಾಕ್ತಾರೆ.ದಯಮಾಡಿ ಸಿಡಿ ಪ್ರಕರಣ ಕೇಸರೆರಚಾಟ ಮಾಡೋದ್ರಿಂದ.ಜಾರಕಿಹೊಳಿ ಕುಟುಂಬ, ಡಿಕೆ ಶಿವಕುಮಾರ್ ಕುಟುಂಬ, ಹೆಬ್ಬಾಳ್ಕರ್ ಅವರ ಕುಟುಂಬಕ್ಕೆ ದಕ್ಕೆ ಆಗುತ್ತದೆ ಎಂದರು.