ಹುಬ್ಬಳ್ಳಿ: ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ರಾಜಕೀಯವಾಗಿ ನನ್ನ ಎರಡನೆಯ ಇನ್ನಿಂಗ್ಸ್ ಆರಂಭವಾಗಿದೆ. ವಿಧಾನ ಪರಿಷತ್ನಲ್ಲಿ ಸದಸ್ಯನಾಗಿ ಕೆಲಸ ಮಾಡೋಕೆ ಅವಕಾಶ ಸಿಕ್ಕಿರೋದು ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ. ಹೊಸ ಮನ್ವಂತರಕ್ಕೆ ಕಾರಣರಾದ ಕಾಂಗ್ರೆಸ್ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡ್ತೇನೆ ಎಂದು ಹೇಳಿದರು.
ಹುಬ್ಬಳ್ಳಿ ಭಾಗದ ಸಮಸ್ಯೆಗಳನ್ನು ಸದನದ ಗಮನಕ್ಕೆ ತಂದು ಪರಿಹರಿಸೋ ಪ್ರಯತ್ನ ಮಾಡ್ತೇನೆ ಎಂದ ಜಗದೀಶ್ ಶೆಟ್ಟರ್, ಪರಿಷತ್ನಲ್ಲಿ ಯಾವ ಸ್ಥಾನ ನೀಡ್ತಾರೆ ಅನ್ನೋದು ಕಾಂಗ್ರೆಸ್ಗೆ ಬಿಟ್ಟ ವಿಚಾರ. ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವಾಗ ಕೆಲ ಭರವಸೆ ಕೊಟ್ಟಿದ್ದಾರೆ. ಇನ್ನೂ ಹೆಚ್ಚಿನ ಸ್ಥಾನಮಾನ ಕೊಡುವ ಭರವಸೆ ನೀಡಿದ್ದಾರೆ. ಯಾವ ರೀತಿಯ ಸ್ಥಾನಮಾನ ಕೊಡ್ತಾರೆ ಅನ್ನೋದು ಕಾಂಗ್ರೆಸ್ಗೆ ಬಿಟ್ಟ ವಿಚಾರ. ಸಭಾಪತಿ, ಸಚಿವ ಸ್ಥಾನ ಯಾವುದು ಬೇಕು ಅನ್ನೋದನ್ನು ಇನ್ನೂ ಪ್ರಸ್ತಾಪ ಮಾಡಿಲ್ಲ, ನಾನು ಕಾದು ನೋಡ್ತೇನೆ ಎಂದರು.
ಇನ್ನು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕೊಡೋ ಜವಾಬ್ದಾರಿ ನಿರ್ವಹಿಸ್ತೇನೆ ಎಂದ ಜಗದೀಶ್ ಶೆಟ್ಟರ್, ಗೆಲುವಿಗೆ ಏನೆಲ್ಲಾ ಪ್ರಯತ್ನಗಳಾಗಬೇಕೋ, ಅದನ್ನು ಮಾಡ್ತೇನೆ. ಲೋಕಸಭೆಯಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಗೆಲ್ಲಿಸಲು ಪ್ರಯತ್ನಿಸ್ತೇನೆ. ಉತ್ತರ ಕರ್ನಾಟಕದ 11 ಸೀಟುಗಳ ಪೈಕಿ ಕನಿಷ್ಟ ಆರೇಳು ಸೀಟು ಗೆಲ್ಲಿಸೋ ಗುರಿ ಇದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ನಾಯಕರನ್ನು ಸೆಳೆಯುತ್ತಿಲ್ಲ, ಬಿಜೆಪಿ ಆಂತರಿಕ ಬೇಗುದಿಯಲ್ಲಿ ಬೇಯುತ್ತಿದೆ. ಅದು ಯಾವಾಗ ಸ್ಫೋಟವಾಗುತ್ತೋ ಗೊತ್ತಿಲ್ಲ. ನಾವು ಯಾರನ್ನೂ