ಹುಬ್ಬಳ್ಳಿ, ಭಾರತೀಯ ಜನತಾ ಪಾರ್ಟಿಗೆ ಮರಳಿ ವಾಪಾಸ ಆಗುವಂತೆ ನನ್ನ ಮೇಲೆ ಒತ್ತಡ ಇದೆ. ಆದರೆ ಅಪಮಾನವಾಗಿ ಅಲ್ಲಿಂದ ಹೊರ ಬಂದಿದ್ದೇನೆ. ಮರಳಿ ಬರುವ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟ ಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗರೀಶ್ ಶೆಟ್ಟರ್ ಅವರಿಗೆ ಅನ್ಯಾಯವಾಗಿದೆ. ಅವರು ಪಕ್ಷ ಬಿಟ್ಟ ಮೇಲೆ ಸಮಸ್ಯೆಯಾಗಿದೆ ಎಂಬ ಭಾವನೆ ಆ ಪಕ್ಷದ ಕಾರ್ಯಕರ್ತರು, ಪ್ರಮುಖರು ಮತ್ತು ಮಾಜಿ ಶಾಸಕರಲ್ಲಿ ಇದೆ. ಅದಕ್ಕಾಗಿ ಮರಳಿ ವಾಪಾಸ್ ಬರುವಂತೆ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಆದರೆ ಪ್ರಭಾವಿ ನಾಯಕರು ಇನ್ನೂ ನನ್ನನ್ನು ಸಂಪರ್ಕ ಮಾಡಿಲ್ಲ. ಆ ಬಗ್ಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.
ನಾನು ಬಿಜೆಪಿಯ ಮಾಜಿ ಶಾಸಕ ಶಂಕರ ಪಾಟೀಲ್ ಸೇರಿದಂತೆ ಯಾವ ನಾಯಕರನ್ನು ಬಲವಂತವಾಗಿ ಕಾಂಗ್ರೆಸ್ಗೆ ಬರುವಂತೆ ಒತ್ತಡ ಹೇರುತ್ತಿಲ್ಲ. ರಾಮಣ್ಣ ಲಮಾಣಿ ಸೇರಿ ಕೆಲವರು ನೀವು ಎಲ್ಲಿ ಇರುತ್ತೀರೋ ನಾವು ಅಲ್ಲೇ ಇರುತ್ತೇವೆ ಎಂದಿದ್ದಾರೆ. ಅಂತಹವನ್ನು ಕಾಂಗ್ರೆಸ್ ನಾಯಕರ ಬಳಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದೇನೆ ಎಂದರು.