ಕಿತ್ತೂರು : ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮ ಪಂಚಾಯತಿ ಪಿಡಿಓ ಅವರು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ತಿಗಡಿ ಸೇರಿ ಸದಸ್ಯರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ 2.30 ಲಕ್ಷ ಹಾಗೂ ಕಂಪ್ಯೂಟರ್ ಉತಾರ ಮಾಡುವಲ್ಲಿ 6.50 ಲಕ್ಷ ಅವ್ಯವಹಾರ ನಡೆದಿದೆ. ಇದರ ಬಗ್ಗೆ ತಾಲೂಕು ಪಂಚಾಯತಿ ಇಓ ಅವರ ಗಮನಕ್ಕೆ ತಂದರು ಕೂಡಾ ಏನು ಪ್ರಯೋಜನವಾಗಿಲ್ಲ.
ನರೇಂಗಾ ಸೇರಿ ಗ್ರಾಮ ಪಂಚಾಯತಿ ವಿವಿಧ ಯೋಜನೆಯಡಿಲ್ಲಿ ಕೈಗೊಳ್ಳಲಾದ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ. ಮನೆ ಹಾಗೂ ದನದ ತೊಟ್ಟಿ ಕಟ್ಟಿಕೊಂಡ ಫಲಾನುಭವಿಗಳಿಗೆ ದುಡ್ಡು ಬಿಡುಗಡೆಯಾಗಿಲ್ಲ. ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೆ ಕಮೀಷನ್ ನೀಡಬೇಕು. ಹೀಗಾಗಿ
ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಬಂದು ಸಮಸ್ಯೆ ಕೇಳುವವರೆಗೂ ಗ್ರಾಮ ಪಂಚಾಯತಿ ಬೀಗ ತೆಗೆಯುವದಿಲ್ಲ ಎಂದು ಸದಸ್ಯ ಸಲೀಂ ಮೊಖಾಶಿ ಆಗ್ರಹಿಸಿದರು.