ಬೆಳಗಾವಿ

ಸಂತ ಸೇವಾಲಾಲ್ ಮಹಾರಾಜರ 284ನೇ ಜಯಂತೋತ್ಸವದ ಭವ್ಯ ಮೆರವಣಿಗೆ 

ರಾಮದುರ್ಗ : ಪಟ್ಟಣದಲ್ಲಿ ಬಂಜಾರ ಸಮುದಾಯದಿಂದ ಸಂತ ಸೇವಾಲಾಲ್ ಮಹಾರಾಜರ 284ನೇ ಜಯಂತೋತ್ಸವದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ವಿವಿಧ ವಾದ್ಯ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂತ ಸೇವಾಲಾಲರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.  ಮೆರವಣಿಗೆಯಲ್ಲಿ ಆನೆ, ಕುದುರೆಗಳು, ಡೊಳ್ಳು ಕುಣಿತ ಸೇರಿದಂತೆ ವಿವಿಧ ನೃತ್ಯಗಳು ವಿಶೇಷವಾಗಿತ್ತು,  ಮೆರವಣಿಗೆಯಲ್ಲಿ ರಾಮದುರ್ಗ ತಾಲೂಕಿನ ಬಂಜಾರ ಸಮುದಾಯದ ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾಗಿಯಾಗಿ ರಸ್ತೆ ಯುದ್ಧಕ್ಕೂ ನೃತ್ಯ ಮಾಡುತ್ತಿರುವ ದೃಶ್ಯ ಕಂಡು ಬಂದಿತ್ತು. ನಂತರ ತಾಲೂಕು ಆಡಳಿತ ವತಿಯಿಂದ ಪುರಸಭೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವನ್ನು ಶಾಸಕರಾದ  ಮಹಾದೇವಪ್ಪ ಯಾದವಾಡ ರವರು ದೀಪ  ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ  ಕೊಟ್ಟರು. ಇದೇ ವೇಳೆಯಲ್ಲಿ ಉಪಸ್ಥಿತರಿದ್ದ ಬೀಲಪ್ಪ ಪೂಜಾರಿ,  ಮಲ್ಲಣ್ಣ ಯಾದವಾಡ, ತಹಶೀಲ್ದಾರ್ ಬಸವರಾಜ ನಾಗರಾಳ, ತಾಲೂಕು ಕಾರ್ಯನಿರ್ವಾಹನ ಅಧಿಕಾರಿ ಪ್ರವೀಣ್ ಕುಮಾರ ಸಾಲಿ, ಮುಖ್ಯ ಅತಿಥಿಗಳಾಗಿ  ಚಂದ್ರು ರಜಪೂತ, ಜೀವಪ್ಪ ಲಮಾಣಿ, ಪಿ ಕೆ ರಾಠೋಡ, ರಘುನಾಥ ಠೆನಕೆ, ಪಾರ್ವತಿ ನಾಯಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply