ಬೆಳಗಾವಿಬೆಳಗಾವಿ ನಗರ

ಬೆಳಗಾವಿಗೆ ವಿಶೇಷ ಕೈಗಾರಿಕೆಗಳನ್ನು ತರಲು ಒತ್ತು ಕೊಡಿ:ಅಭಯ ಪಾಟೀಲ

ಬೆಳಗಾವಿ: ವಿಧಾನಸಭೆಯಲ್ಲಿ ಶಾಸಕ ಅಭಯ ಪಾಟೀಲ ಮಾತನಾಡಿದ ಅವರು ಬೆಳಗಾವಿ  ರಾಜ್ಯದ ಎರಡನೇ ರಾಜಧಾನಿ ಎಂದು ಹೇಳುತ್ತಿದೆ ಆದರೆ ದುರ್ದೈವ ಕಳೆದ 35 ವರ್ಷಗಳಿಂದ ಬೆಳಗಾವಿಗೆ ಒಂದು ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಉದ್ದಿಮೆ ಬಂದಿಲ್ಲಾ. ಇದರಿಂದ ಬೆಳಗಾವಿಯನ್ನು ಕೈಗಾರಿಕೆ ಅಭಿವೃದ್ಧಿಗೆ ಮರೆ ತಂದಿದೆ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ರಾಜ್ಯಕ್ಕೆ ನೀಡುವ ಕೈಗಾರಿಕೆಯನ್ನು ಬೆಳಗಾವಿಗೆ ವಿಶೇಷ ಕೈಗಾರಿಕೆಗಳನ್ನು ಪೂರಕವಾಗಿ ಮಾಡಬೇಕು, ರಿಯಾನ್ ಹುಬ್ಬಳ್ಳಿ ಮಾಡಬೇಕು ಎಂದು ಆಗ್ರಹಿಸಿದರು.ಇದಕ್ಕೆ ಉತ್ತರ ನೀಡಿದ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಗ್ಲೋಬಲ್ ಮೀಟ್ ಮಾಡುವ ಮೂಲಕ ಬೆಳಗಾವಿ , ಹುಬ್ಬಳ್ಳಿ, ಧಾರವಾಡ, ಮೈಸೂರು ಭಾಗಗಳಲ್ಲಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವದು .
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಗೋಲ್ಡ ಗ್ಲಾಸ್ ಉದ್ದಿಮೆಯನ್ನು 8 ತಿಂಗಳಲ್ಲಿ ಪ್ರಾರಂಭವಾಗಲಿದೆ ಅಲ್ಲದೆ ರಷ್ಯಯನ್ ಕಂಪನಿ ರಾಜ್ಯದಲ್ಲಿ ಬ್ಯಾಟರಿ ಚಾಲಿತ ವಾಹನ ತಯಾರಿಸುವ ಘಟಕವನ್ನು ಸ್ಥಾಪಿಸಲು ಮುಂದು ಬಂದಿದೆ. ಅದನ್ನು ಬೆಳಗಾವಿಯಲ್ಲಿ ಆರಂಭಿಸುವಂತೆ ಮನವರಿಕೆ ಮಾಡಲಾಗಿದೆ, ಮುಂಬರುವ ದಿನಗಳಲ್ಲಿ ಶಾಸಕ ಅಭಯ ಪಾಟೀಲ ಜೊತೆ ಮಾತನಾಡಿ ರೈತರಿಂದ ಜಮಿನು ಪಡೆದು ಆಟೋಮೊಬೈಲ್ ಕಂಪನಿಗಳನ್ನು ಬೆಳಗಾವಿಯಲ್ಲಿ ಪ್ರಾರಂಭಿಸಲು ಪ್ರಯತ್ನಿಸಲಾಗುವದು ಎಂದು ಪ್ರಶ್ನೋತ್ತರ ಪ್ರಶ್ನೆಗೆ ಉತ್ತರ ನೀಡಿದರು 
TV24 News Desk
the authorTV24 News Desk

Leave a Reply