ಬೆಳಗಾವಿ: ಮಚ್ಚೆಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮಧುರಾ ಕೇಶವ ಮೊರೆ 13 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ತಂದೆಯ ಕೇಶವ ಮೊರೆ ಕೆಲಸದ ನಿಮಿತ್ತ ಕೊಲ್ಲಾಪುರ ದಲ್ಲಿ ನೆಲಸಿದ್ದರು.ಇತ್ತೀಚಿಗೆ ಬೇಸಿಗೆ ರಜೆ ಕಳೆಯಲು ಮಚ್ಚೆ ಗ್ರಾಮಕ್ಕೆ ಬಂದ ಹಿನ್ನಲೆ ಆಟವಾಡುತ್ತಿದ್ದ ವೇಳೆ ಕೈಗೆ ಹೈ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಮನೆಯ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ
ಈ ಕುರಿತು ಕಳೆದ 2 ವರ್ಷಗಳಿಂದ ಹೆಸ್ಕಾಂ ಗೆ ದೂರು ನೀಡುತ್ತಿದ್ದರು ಯಾವ ಅಧಿಕಾರಿಗಳು ತಲೆಕೆಡಿಸಿಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.