ಸಂಕೇಶ್ವರ: ಅಬಕಾರಿ ಇಲಾಖೆ ದಾಳಿ ಅಕ್ರಮ ಮಧ್ಯ ವಶ ಹುಕ್ಕೇರಿ ತಾಲೂಕಿನ ಘೊಡಗೇರಿ ಗ್ರಾಮದಲ್ಲಿ ದಿನಾಂಕ ನಿನ್ನೆ ಡಾ.ವಾಯ್ ಮಂಜುನಾಥ ಅಬಕಾರಿ ಅಪರ ಆಯುಕ್ತರು ಬೆಳಗಾವಿ. ಫಿರೋಜ ಕಿಲ್ಲದಾರ ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ಬೆಳಗಾವಿ. ಜಗದೀಶ ಕುಲಕರ್ಣಿ ಅಬಕಾರಿ ಉಪ ಆಯುಕ್ತರು ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ, ಅನಿಲಕುಮಾರ ನಂದಿಶ್ವರ ಅಬಕಾರಿ ಅಧಿಕ್ಷಕರು ಉಪ ವಿಭಾಗ ಚಿಕ್ಕೋಡಿ ಇವರ ಮಾರ್ಗದರ್ಶನದಲ್ಲಿ ಅಬಕಾರಿ ನೀರಕ್ಷಕಾರದ ಶ್ರೀ ವಿಜಯಕುಮಾರ ಸಿ ಮೇಳವಂಕಿ ಹುಕ್ಕೇರಿ ವಲಯ ರವರ ನೇತೃತ್ವದಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿ ಕೂಡಿಕೊಂಡು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಜನತಾ ಪ್ಲಾಟಿನಲ್ಲಿರುವ ಮನೆಯ ಮೇಲೆ ಅಬಕಾರಿ ದಾಳಿ ನಡೆಸಿದ ಅಕ್ರಮವಾಗಿ ಲೈಸನ್ಸ್ ವ ಪರ್ಮಿಟ್ ಇಲ್ಲದೆ ಮಧ್ಯವನ್ನು ಜಪ್ತು ಮಾಡಿಕೊಂಡು ಅಬಕಾರಿ ನೀರಕ್ಷಕರಾದ ವಿಜಯಕುಮಾರ ಸಿ ಮೇಳವಂಕಿ ಹುಕ್ಕೇರಿ ವಲಯ ರವರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.
ಆರೋಪಿತರಾದ (1)ಬಸವರಾಜ ಅಲಿಯಾಸ್ ಅಜಿತ್ ನಿರಂಜನ ತೆಗ್ಗಿನಮನಿ ವಯಸ್ಸು ( 28) . . ಘೋಡಗೇರಿ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಮತ್ತೊರ್ವ ಆರೋಪಿ(2)ಚಂದ್ರಪ್ಪ ತಳವಾರ ಓಡಿ ಪರಾರಿ ಆಗಿದ್ದು ಪತ್ತೆ ಹಚ್ಚಲು ಜಾಲ ಬಿಸಲಾಗಿದೆ. ದಾಳಿಯಲ್ಲಿ ಅಬಕಾರಿ ಉಪ ನೀರಕ್ಷಕರಾದಸುನಿಲಕುಮಾರ ಡಿ ಹಾಗೂ ಸಿಬ್ಬಂದಿ ಶಾಮರಾಯ ತಳವಾರ, ನಿವಾಸ್ ಗುಂಜಿಕರ. ಬಸವರಾಜ ಡಿ ಬಸಗೌಡ ಪಾಟೀಲ ಶಂಕರಾನಂದ ಮುದೋಳ ಕಾಡೆಶ ಗಡದ ರಾಜು ಅಂಬಾರಿ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು