ಧಾರವಾಡ

ಬಿಜೆಪಿ ಕರಪತ್ರದಲ್ಲಿ ಕೈ ಜಗದೀಶ್​ ಶೆಟ್ಟರ್​​ ಫೋಟೋ..! 

ಧಾರವಾಡ: ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್  ಸೇರ್ಪಡೆ​. ಸಂಘ ಪರಿವಾರದಿಂದ ಬಂದು, ಬಿಜೆಪಿಯಲ್ಲಿ 6 ಬಾರಿ ಶಾಸಕರಾಗಿ, ಮಂತ್ರಿಯಾಗಿ, ವಿಪಕ್ಷನಾಯಕನಾಗಿ ಕೊನೆಗೆ ಮುಖ್ಯಮಂತ್ರಿಯಾದವರು ಕಾಂಗ್ರೆಸ್​ ಸೇರಿರುವುದು ಬಿಜೆಪಿಗೆ ಶಾಕ್​ ನೀಡಿದೆ.  ಪ್ರಬಲ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಸಮುದಾಯ ಮುಖಂಡ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಅವರೇ ಹೇಳುವ ಪ್ರಕಾರ ಸ್ವಾಭಿಮಾನಕ್ಕೆ ದಕ್ಕೆಯಾಗಿದ್ದರಿಂದ.ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿ ಟಿಕೆಟ್‌ ನೀಡದ್ದಕ್ಕೆ ಜಗದೀಶ್​ ಶೆಟ್ಟರ್‌ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು.ಈ ವೇಳೆ ಬಿಜೆಪಿ ಹಿರಿಯ ನಾಯಕರು ಮನವೊಲಿಸಲು ಎಷ್ಟೇ ಪ್ರಯತ್ನ ಮಾಡಿದರೂ ಹಠ ಬಿಡಲಿಲ್ಲ. ಕೊನೆಗೂ ಏಪ್ರಿಲ್ ೧೭ ರಂದು ಕಾಂಗ್ರೆಸ್​​ ಸೇರಿ ಟಿಕೆಟ್ ಸಹಿತ ಪಡೆದರು.
ಆದರೆ ಈಗ ಬಿಜೆಪಿ ಪಕ್ಷದ ಕರಪತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಅವರ ಪೋಟೋ ಇದ್ದು, ಅದನ್ನೇ ಹಂಚಲಾಗುತ್ತಿದೆಯಂತೆ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ ಅವರ ಕರಪತ್ರದಲ್ಲಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ರಾರಾಜಿಸುತ್ತಿದ್ದು ಇದನ್ನು ನೋಡಿ ಕ್ಷೇತ್ರದ ಜನ ಬೆಚ್ಚಿ ಬೆರಗಾಗಾಗಿದ್ದಾರೆ. 
TV24 News Desk
the authorTV24 News Desk

Leave a Reply