ಬೆಳಗಾವಿ:
ಬೆಳಗಾವಿಯಲ್ಲಿ ಗೋ ರಕ್ಷಕರನ್ನು ಗಿಡಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಡೆತ ತಿಂದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಎಫ್ ಐ ಅರ್ ದಾಖಲಾಗಿದೆ.
ಬಿಎನ್ಎಸ್ ಖಾಯ್ದೆ 189(2)192(2)115(2)352(2)126(2)190) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಶಿವಪುತ್ರ ಸನದಿ ಎಂಬುವವರಿಂದ
ಯಮಕನಮರಡಿ ಪೊಲೀಸರಿಗೆ ದೂರು ನೀಡಲಾಗಿದೆ.ಇನ್ನು ಎಫ್ ಐ ಆರ್ ನಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಆರೋಪವನ್ನು ದಾಖಲಿಸಲಾಗಿದೆ.ಇತ್ತ ಹಲ್ಲೆ ಮಾಡಿದವರ ಮೇಲೆ ಯಮಕನಮರಡಿ ಪೊಲೀಸರು ಸೊಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಎನ್ಎಸ್102/2025ಕಲಂ 126(2) 127(2) 115(2) 118(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಪುತ್ರ ಸನದಿ,ಬಾಬುಸಾಬ್ ಮುಲ್ತಾನಿ,ಮತ್ತು ಇಂಗಳಿ ಗ್ರಾಮದ ಕೆಲವರ ಮೇಲೆ ದೂರು ದಾಖಲಾಗಿದೆ.ಮರಕ್ಕೆ ಕಟ್ಟಿ ಹಾಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಮೊಟೊ ಪ್ರಕರಣ ದಾಖಲಿಸಿಕೊಳ್ಳಗಿದ್ದು ಸಧ್ಯ ಪೊಲೀಸರುಎರಡೂ ಕಡೆ ದೂರುಗಳನ್ನು ಪಡೆದು ತನಿಖೆ ಪ್ರಾರಂಭಿಸಿದ್ದಾರೆ.ಜಿಲ್ಲೆಯಲ್ಲಿ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣ ಒಂದೇ ಠಾಣೆಯಲ್ಲಿ ದಾಖಲಾಗಿವೆ.


