ಖಾನಾಪೂರ: ಇಟ್ಟಂಗಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಒಂದು ಪಲ್ಟಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟು ಚಾಲಕ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಖಾನಾಪೂರ ತಾಲ್ಲೂಕಿನಲ್ಲಿ ನಡೆದಿದೆ.
ದಾವಲಸಾಬ ಪಾಯಾಜ್ ಮುನವಳ್ಳಿ ಈ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ. KL 59. A 7449 TATA 909 ಸಂಖ್ಯೆಯ ಗೂಡ್ಸ್ ವಾಹನವು ಇಟಗೆ ತುಂಬಿ ದೇವಲತ್ತಿ ಪಾರಿಶ್ವಾಡ ಮದ್ಯದಲ್ಲಿ ಸಾಗುತ್ತಿದ್ದಾಗ ಪಲ್ಟಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.ಈ ಘಟನೆಯಲ್ಲಿ ಚಾಲಕ ಮಂಜುನಾಥ ಚಂದ್ರು ಕುಕಡೊಳ್ಳಿ ಹಾಗೂ ಕಾರ್ಮಿಕನಾದ ಮಂಜುನಾಥ ಈರಪ್ಪಾ ಗುರನ್ನವರ ಇವರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.








