ಬೆಳಗಾವಿಬೆಳಗಾವಿ ನಗರ

ಸುರೇಶ ಅಂಗಡಿ ನೆನೆದು ಕಣ್ಣೀರು ಹಾಕಿದ ಮಂಗಳಾ ಅಂಗಡಿ

ಬೆಳಗಾವಿ: ನಗರದ ರೈಲು ನಿಲ್ದಾಣವನ್ನು ಸಂಪೂರ್ಣ ಸುಸಜ್ಜಿತ ರೈಲು ನಿಲ್ದಾಣವನ್ನಾಗಿ ಪರಿವರ್ತಿಸುವ ದಿವಂಗತ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕನಸು ಇಂದು ನನಸಾಗಿದೆ ಅದನ್ನು ಪ್ರಧಾನಿ ಮೋದಿ ಉದ್ಘಾಟಿಸುವರು ಎಂದು ಮಂಗಳಾ ಅಂಗಡಿ ಭಾವುಕರಾದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ರೈಲು ನಿಲ್ದಾಣವನ್ನು ನವೀಕರಿಸುವುದು ದಿವಂಗತ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕನಸಾಗಿತ್ತು. ಅದು ಇಂದು ಸಾಕಾರಗೊಳ್ಳುತ್ತಿದೆ. ಬೆಳಗಾವಿ ರೈಲು ನಿಲ್ದಾಣವು ಸುಸಜ್ಜಿತ ಮತ್ತು ಆಧುನೀಕರಣಗೊಂಡಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳು, ರಾಜ್ಯ ಸರಕಾರ ಹಾಗೂ ಇಲ್ಲಿನ ರೈಲ್ವೆ ಅಧಿಕಾರಿಗಳ ಸಹಕಾರ ಪಡೆಯಲಾಗಿದೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲು ನಿಲ್ದಾಣವನ್ನು ಉದ್ಘಾಟಿಸಲಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದು ಹೇಳಿದರು. 
TV24 News Desk
the authorTV24 News Desk

Leave a Reply