ಬೆಳಗಾವಿ: ಸುವರ್ಣಸೌಧದಿಂದ 2 ಕಿಮಿ ಅಂತರದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಮಕಾರಟ್ಟಿ ಗ್ರಾಮದ ಸಮೀಪ ಕಿರಿದಾದ ಸೇತುವೆ ಬಳಿ ಬುಧವಾರ ಬೆಳಗ್ಗೆ ಟಿಪ್ಪರ ಹಾಗೂ ಟ್ರ್ಯಾಕ್ಟರ್ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು ತಿಳಿದು ಬಂದಿದೆ.
ಖಡಿ ತುಂಬಿದ ವಾಹನ ಪಲ್ಟಿಯಾದ ಕಾರಣ ಖಡಿಯಲ್ಲಿ ಹೂತುಹೋಗಿದ್ದ ಮೃತನ ಶವವನ್ನು ಹೊರತೆಗೆಯಲಾಗಿದೆ. ಮೃತನ ಮಾಹಿತಿ ತಿಳಿಯಬೇಕಿದೆ ಹಿರೇಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.