ಬೆಳಗಾವಿ: ಕಬ್ಬು ಕಟಾವು ವಿಚಾರದಲ್ಲಿ ಸಹೋದರರ ಮಧ್ಯೆ ಗಲಾಟೆ ಆಗಿದ್ದು, ಗಾಳಿಯಲ್ಲಿ ಒಬ್ಬ ಸಹೋದರ ಗುಂಡು ಹಾರಿಸಿದ್ದಾರೆ.
ಶ್ರೀಶೈಲ ಬಾಳಗೌಡ ಪಾಟೀಲ ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿಯಾಗಿದ್ದು,ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ನಡೆದ ಘಟನೆ. ಇಬ್ಬರ ಗಲಾಟೆ ವೇಳೆ ಎರಡು ಸುತ್ತು ಗಾಳಿಯಲ್ಲಿ ಶ್ರೀಶೈಲ ಎಂಬಾತ ಗುಂಡು ಹಾರಿಸಿದ್ದಾರೆ.
ಗಲಾಟೆ ಹಿನ್ನೆಲೆ ಇಬ್ಬರು ಸಹೋದರರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಶ್ರೀಶೈಲ ಪಾಟೀಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಾರೋಗೆರಿ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ