ರಾಮದುರ್ಗ: ಪಟ್ಟಣದ ಹೊರವಲಯದಲ್ಲಿ 3 ಎಕರೆ ಪ್ರದೇಶದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮದುರ್ಗ ನ್ಯಾಯಾಲಯದ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮ ಶಾಸಕರಾದ ಮಹಾದೇವಪ್ಪ ಯಾದವಾಡ ನೇರವರಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಸಯ್ಯದ್ ಅಜೀಜ್ ಅವರು ಸೇರಿದಂತೆ ಗೌರವಾನ್ವಿತ ನ್ಯಾಯಾಧೀಶರು, ನ್ಯಾಯವಾದಿಗಳು ಉಪಸ್ಥಿತರಿದ್ದರು. ಇದೇ ವೇಳೆಯಲ್ಲಿ ಮಾತನಾಡಿದ ಶಾಸಕರು ಪ್ರಜೆಗಳ ರಕ್ಷಣೆ ನ್ಯಾಯ ಒದಗಿಸಿಕೊಡುವುದು ಹಾಗೂ ಸಾಮಾನ್ಯ ಜನರು ತೊಂದರೆಗಳನ್ನು ನಿವಾರಿಸಲು ನ್ಯಾಯಾಲಯ ತನ್ನದೇ ಆದ ಕಾರ್ಯವನ್ನು ನಿರ್ವಹಿಸುತ್ತದೆ. ನ್ಯಾಯಾಲಯ ಕಾನೂನು ವ್ಯವಸ್ಥೆ ಹಾಗೂ ಜನರ ರಕ್ಷಣೆಗೆ ತುಂಬಾ ಅವಶ್ಯಕ ಎಂದು ಹೇಳಿದರು