ಬೆಳಗಾವಿ

ವಿದ್ಯುತ್ ಸ್ಪರ್ಶ ಗುತ್ತಿಗೆ ನೌಕರನ ಸಾವು 

ಚಿಕ್ಕೋಡಿ: ದುರಸ್ತಿ ಕಾರ್ಯ ವೇಳೆ ವಿದ್ಯುತ್ ಸ್ಪರ್ಶ  ಕಂಬದ ಮೇಲೆ ಹೆಸ್ಕಾಂ ಗುತ್ತಿಗೆ ನೌಕರ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ‌ಚಿಕ್ಕೋಡಿ ಪಟ್ಟಣದ ಹೊಸಪೇಟ ಗಲ್ಲಿ ನಡೆದಿದೆ.

ಕರ್ತವ್ಯನಿರತ ಹೆಸ್ಕಾಂ ಗುತ್ತಿಗೆ ನೌಕರ ಮೂವತ್ತೆಂಟು ವರ್ಷದ ಸಿದ್ದರಾಮ ಕುಪವಾಡೆ ಸಾವನ್ನಪ್ಪಿದ ವ್ಯಕ್ತಿ.ಮೃತ ಸಿದ್ದರಾಮ ಕುಪವಾಡೆ ಚಿಕ್ಕೋಡಿ ಪಟ್ಟಣದ ದಫೇದರಕೋಡಿಯ ನಿವಾಸಿ ಮೃತ ಸಿದ್ದರಾಮ ಹೊಸಪೇಟ ಗಲ್ಲಿಯ ಹೊರವಲಯದ ಕೃಷಿ ಜಮೀನು ಬಳಿ ವಿದ್ಯುತ್ ಕಂಬದ ಮೇಲೆ ದುರಸ್ತಿಗೆಂದು ಏರಿದ್ದ,ಇಬ್ಬರು ನೌಕರರು ಕೆಳಗೆ ಇದ್ದರು.ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಸಿದ್ದರಾಮ ಕುಪವಾಡೆ ಸಾವನ್ನಪ್ಪಿದ್ದಾನೆ.ವಿದ್ಯುತ್ ಕಂಬದ ಮೇಲೆ ಸಿದ್ದರಾಮ ಕುಪವಾಡೆ ಮೃತ ದೇಹ ನೇತಾಡುತ್ತಿದೆ.ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು, ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

TV24 News Desk
the authorTV24 News Desk

Leave a Reply