ರಾಜ್ಯ

ನಾಳೆ ಬೆಳಗಾವಿಯಿಂದ ಕಾಂಗ್ರೆಸ್​ ಬಸ್​​ ಯಾತ್ರೆ ಆರಂಭ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದ್ದು, ರಾಜ್ಯ ಕಾಂಗ್ರೆಸ್​  ನಾಯಕರು ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಶತಾಯಗತಾಯ ಈ ಬಾರಿ ಪೂರ್ಣ ಬಹುಮತದೊಂಗೆ ಅಧಿಕಾರದ ಚುಕ್ಕಾಣಿ ಹಿಡಯಲು ಟೊಂಕ ಕಟ್ಟಿ ನಿಂತಿದ್ದಾರೆ. ಹೀಗಾಗಿ ಭಾರತ ಜೋಡೋ ಯಾತ್ರೆ ನಂತರ ರಾಜ್ಯದಲ್ಲಿ ಬಸ್​ ಯಾತ್ರೆ ಮಾಡಲು ನಿರ್ಧರಿಸಿದ್ದು, ನಾಳೆಯಿಂದ ಕಾಂಗ್ರೆಸ್​ನ ಬಸ್​​ ಯಾತ್ರೆ ಪ್ರಾರಂಭವಾಗಲಿದೆ.ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.  
ಭ್ರಷ್ಟ ಬಿಜೆಪಿ  ಸರ್ಕಾರ ತೊಲಗಿಸಿ ಎಂಬ ಘೋಷ ವಾಕ್ಯದೊಂದಿಗೆ ಜನವರಿ 11ರಿಂದ ರಾಜ್ಯದಲ್ಲಿ ಕಾಂಗ್ರೆಸ್​ನ ಪ್ರಜಾಧ್ವನಿ ಬಸ್ ಯಾತ್ರೆ ಆರಂಭವಾಗುತ್ತದೆ ಎಂದು ನಿನ್ನೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದರು. ಬೆಳಗಾವಿಯ ಟಿಳಕವಾಡಿಯಿಂದ ಬಸ್​​ ಯಾತ್ರೆ ಆರಂಭವಾಗಲಿದೆ. ಅಂದು ಬ್ರಿಟಿಷ್”ರನ್ನ ತೊಲಗಿಸಿ ಎಂಬ ಘೋಷ ವಾಕ್ಯ ಇತ್ತು, ಈಗ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಿ ಎಂಬ ಘೋಷ ವಾಕ್ಯದಿಂದ ಅಭಿಯಾನ ಆರಂಭವಾಗಲಿದೆ. ಕೇಂದ್ರ, ರಾಜ್ಯದ ಪ್ರಮುಖ ನಾಯಕರು ಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ಕಾಂಗ್ರೆಸ್​ ನಾಯಕ ಬಸ್ ಯಾತ್ರೆಯ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ರಾಯರೆಡ್ಡಿ ಹೇಳಿದ್ದರು.
ಬಸ್​ ಯಾತ್ರೆ ಎಲ್ಲೆಲ್ಲಿ 
ಬೆಳಗಾವಿಯಿಂದ ಶುರುವಾಗುವ ಬಸ್ ಯಾತ್ರೆ ಒಟ್ಟೂ 21 ಜಿಲ್ಲೆಗಳಲ್ಲಿ  ಸಂಚರಿಸಲಿದೆ. ಜನವರಿ 11ರಂದು ಬೆಳಗಾವಿ ಜಿಲ್ಲೆ, ಜನವರಿ 16ರಂದು ಹೊಸಪೇಟೆ, ಜನವರಿ 17ರಂದು ಕೊಪ್ಪಳ, ಜನವರಿ 18ರಂದು ಬಾಗಲಕೋಟೆ-ಗದಗ ಜಿಲ್ಲೆಯಲ್ಲಿ ಬಸ್ ಯಾತ್ರೆ, ಜನವರಿ 19ರಂದು ಹಾವೇರಿ-ದಾವಣಗೆರೆ ಜಿಲ್ಲೆ, ಜನವರಿ 21 ಹಾಸನ-ಚಿಕ್ಕಮಗಳೂರು, ಜನವರಿ 22 ಉಡುಪಿ-ದಕ್ಷಿಣ ಕನ್ನಡ. ಜನವರಿ 23 ಕೋಲಾರ-ಚಿಕ್ಕಬಳ್ಳಾಪುರ, ಜನವರಿ 24 ತುಮಕೂರು-ಬೆಂಗಳೂರು ಗ್ರಾಮಾಂತರ ಜನವರಿ 25 ಚಾಮರಾಜನಗರ-ಮೈಸೂರು, ಜನವರಿ 26 ಮಂಡ್ಯ ಮತ್ತು ರಾಮನಗರ, ಜನವರಿ 27 ಯಾದಗಿರಿ-ಕಲಬುರಗಿ.
TV24 News Desk
the authorTV24 News Desk

Leave a Reply