ಬೆಳಗಾವಿ

ಸಾಹುಕಾರನ ಚುನಾವಣಾ ಅಖಾಡದಲ್ಲಿ ಪತ್ರಕರ್ತನ ಖಡಕ್ ಸವಾಲು…!?

ಗೋಕಾಕ: ರಾಜ್ಯದಲ್ಲಿ ಚುನಾವಣಾನ ಕಾವು ಇದೀಗ ರಂಗೇರುತ್ತದೆ. ರಾಜ್ಯದ ಚುನಾವಣಾ ಕಾವಿನ ಒಂದು ತೂಕವಾದ್ರೆ, ರಾಜ್ಯದ ಎರಡನೇಯ ರಾಜ್ಯಧಾನಿ ಎಂದು ಕರೆಯಲ್ಪಡುವ ಬೆಳಗಾವಿ ಜಿಲ್ಲೆಯ ರಾಜಕಾರಣದ ತೂಕವೇ ಬೇರೆ. ಇನ್ನೂ ಅದರಲ್ಲೂ ಗೋಕಾಕ್ ಕ್ಷೇತ್ರದ ಚುನಾವಣೆ ಅಂದ್ರೆ ಸಾಕು ಇಡಿ ರಾಜ್ಯದ ಜನತೆ ಚಿತ್ತ ಗೋಕಾಕನತ್ತ ಇರುತ್ತೆ ಅದಕ್ಕೆ ಕಾರಣ ಸಾಹುಕಾರರು ಸಹೋದರರು. ಇನ್ನು ಈ ಸಹೋದರರಲ್ಲಿ ಹಠವಾದಿ ಛಲವಾದಿ ರಾಜಕಾರಣಿ ಅಂದ್ರೆ ಅದು ರಮೇಶ್ ಜಾರಕಿಹೊಳಿ.
ಈಗ ರಾಜ್ಯದ ಗಮನ ಸೆಳೆಯಲಿರುವ ಗೋಕಾಕ  ವಿಧಾನಸಭಾ ಮತ ಕ್ಷೇತ್ರ ಚುನಾವಣೆಗೆ ತಿಂಗಳುಗಳು ಬಾಕಿ ಇದೆ. ಈಗಾಗಲೇ ಟಿಕೆಟ್ ಫೈಟ್ ಜೋರಾಗಿ ನಡೆಯುತ್ತಿದೆ‌‌. ಆದರೆ ಸಾಹುಕಾರ ರಮೇಶ್ ಈ ಬಾರಿ ಸವಾಲೊಡ್ಡಲು  ಹಿರಿಯ ಪತ್ರಕರ್ತ ಹಾಗೂ ರಾಜಕಾರಣಿ ಚಂದ್ರಶೇಖರ ಕೊಣ್ಣೂರ ಅಖಾಡದಲ್ಲಿ ಕಾದಾಡಲು ಕಾಂಗ್ರೆಸ ಟಿಕೇಟಗಾಗಿ ಲಾಬಿ ನಡೆಸಿದ್ದಾರೆ.
ಗೋಕಾಕ ಕ್ಷೇತ್ರವೆಂದರೆ ಅದು ಕಾಂಗ್ರೆಸ್‌ನ ಭದ್ರ ಕೋಟೆ, ಇದುವರೆಗಿನ ಒಟ್ಟೂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಆಭ್ಯರ್ಥಿಗಳೇ ಜಯಗಳಿಸಿದ್ದು, ಕಳೆದ ಮಧ್ಯಂತರ ಚುನಾವಣೆಯಲ್ಲಿ ಆಪರೇಷನ್ ಕಮಲದಿಂದ ಬಿಜೆಪಿ ಗೆಲುವಿನ ನಗೆ ಬೀರಿತ್ತು ಅಷ್ಟೇ.
ಇದೀಗ  2023 ಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೊಸ ಹುಮ್ಮಸ್ಸನೊಂದಿಗೆ ಚುನಾವಣೆಗೆ ಸನ್ನದ್ಧವಾಗಿವೆ. ಅದರಲ್ಲಿ ಗೋಕಾಕ ಸಾಹುಕಾರರ ಎದಿರು ನಿಲ್ಲಲು ಯಾರು ನಿಲ್ಲಲ್ಲು ಸಾಧ್ಯವಿಲ್ಲ ಎಂದು ಬೀಗುತ್ತಿದ್ದ ಸಾಹುಕಾರನಿಗೆ ಇದೀಗ ಒಬ್ಬ ಸೀನಿಯರ್ ಪತ್ರಕರ್ತ ಚಂದ್ರಶೇಖರ ಕೊಣ್ಣೂರು ಖಡಕ್ ಸವಾಲೊಡ್ಡಲು  ಮುಂದಾಗಿದ್ದಾರೆ.
1987 ರಿಂದ  ರಾಜಕೀಯ ಹಾಗೂ ಮಾಧ್ಯಮ ಕ್ಕ್ಷೇತ್ರದಲ್ಲಿ  ಅನುಭವವಿರುವ ಚಂದ್ರಶೇಖರ ಕೊಣ್ಣೂರ ಈಗ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ  ಟಕ್ಕರ್ ನೀಡಲು  ಕಾಂಗ್ರೆಸನಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ಕಳೆದ ಮೂವತ್ತು ವರ್ಷಗಳಿಂದ ಗೋಕಾಕ ರಾಜಕೀಯವನ್ನು ಬಹಳ ಸಮೀಪದಿಂದ ನೋಡಿದ್ದಾರೆ.
ಅದಲ್ಲದೇ, ಗ್ರಾಮ ಪಂಚಾಯತಿ  ಹಾಗೂ ತಾಲೂಕು ಪಂಚಾಯತ ಸದಸ್ಯರಾಗಿ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಬಗ್ಗೆ ಸುದ್ದಿ ವಾಹಿನಿಗೆ ಮಾಹಿತಿ ನೀಡಿರುವ ಕೊಣ್ಣೂರು ಅವರು ನನಗೆ ರಾಜಕೀಯ ಮುಖ್ಯವಲ್ಲ ಜನರ ಸೇವೆಯೇ ನನ್ನ ಗುರಿ, ಬಡ ಮಕ್ಕಳಿಗೆ ಅರ್ಹತೆಯ ಮೇಲೆ ಹಾಸ್ಟೆಲ ವ್ಯವಸ್ಥೆ, ವ್ಯಾಪಾರಿಗಳು ಮುಕ್ತವಾಗಿ ವ್ಯಾಪಾರ ಮಾಡಬೇಕು, ಗುತ್ತಿಗೆದಾರರರ ಕಮಿಷನ್ ದಂಧೆ ನಿಲ್ಲಬೇಕು,  ನನಗೆ ಗೋಕಾಕ ಕ್ಷೇತ್ರದಿಂದ ಜನಾದೇಶವಾದರೆ ಸರ್ವಾಧಿಕಾರವನ್ನು ತೊಲಗಿಸಿ ಭ್ರಷ್ಟಾಚಾರ ಹಾಗೂ  ನಿರ್ಭಯವಾದ ವಾತಾವರಣ ನಿರ್ಮಾಣ ಮಾಡಿ ಜ್ಯಾತ್ಯಾತೀತವಾಗಿ ಕೆಲಸ ಮಾಡುವೆ ಎಂದು ಶಪತಗೈದಿದ್ದಾರೆ.
TV24 News Desk
the authorTV24 News Desk

Leave a Reply