ಬಾಗಲಕೋಟೆ: ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡು, ಹಲವರಿಗೆ ಗಾಯಗಳಾದ ಘಟನೆ ಗದ್ದನಕೇರಿ ಸಮೀಪವಿರುವ ಇಟಗಿ ಭೀಮಮ್ಮ ದೇವಸ್ಥಾನದ ಬಳಿ ನಡೆದಿದೆ.ಅರಕೇರಿ ಗ್ರಾಮದ ವಿದ್ಯಾರ್ಥಿ ರಾಹುಲ್ ಮೃತಪಟ್ಟ ದುರ್ದೈವಿ. ಬಸ್ ಅಮಲಜರಿಯಿಂದ ಬಾಗಲಕೋಟೆಗೆ ಬರುತ್ತಿದ್ದ ವೇಳೆ ಕ್ಯಾಂಟರ್ ಬಾಗಲಕೋಟೆಯಿಂದ ಬೆಳಗಾವಿ ಕಡೆಗೆ ಹೊರಟಿದ್ದ ಕ್ಯಾಂಟರ್ ಅತಿ ವೇಗದಿಂದಾಗಿ ಅದು ಹೋಗಿ ಬಸ್ಸಿಗೆ ಗುದ್ದಿದೆ. ಬಸ್ ನಿಯಂತ್ರಣ ತಪ್ಪಿ ಕೆಳಗಿನ ತಗ್ಗಿನ ಪ್ರದೇಶಕ್ಕೆ ಬಿದ್ದಿದೆ.ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬೀಳಗಿ ತಾಲೂಕಿನ ಅರಕೇರಿ ಗ್ರಾಮದ ರಾಹುಲ್ ಅಪಘಾತದ ರಭಸಕ್ಕೆ ದೇಹ ತುಂಡು ತುಂಡಾಗಿ ಬಿದ್ದಿರುವ ದೃಶ್ಯ ಎಂಥವರ ಮನಸ್ಸನ್ನೂ ಕಲಕುವಂತಿತ್ತು.ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
tv24plus.in > Blog > ಜಿಲ್ಲೆ > ಬಾಗಲಕೋಟೆ > ಭೀಕರ ಅಪಘಾತ ವಿದ್ಯಾರ್ಥಿ ಸಾವು
the authorTV24 News Desk
All posts byTV24 News Desk
Leave a reply
You Might Also Like
ನೂಕು ನುಗ್ಗಲು ಬಸ್ ಚಾಲಕ ಕಂ ನಿರ್ವಾಹಕ ಸಾವು..!
TV24 News DeskJanuary 19, 2024
3 ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ…!
TV24 News DeskAugust 26, 2023
ಒಂದೇ ಕುರ್ಚಿಗಾಗಿ ಆರೋಗ್ಯಾಧಿಕಾರಿಗಳ ಕಾದಾಟ..!
TV24 News DeskAugust 21, 2023