ಬೆಳಗಾವಿ

ಕೆಕೆ ಕೊಪ್ಪ  ಬಳಿ ಬಿಸಾಕಿದ್ದ ಊಟ ಸೇವಿಸಿ 10 ಕುರಿಗಳು ಸಾವು  

ಬೆಳಗಾವಿ : ಊಟ ಮಾಡಿದ  ಬಿಸಾಡಿದ ಊಟ ತಿಂದು ೧೦ ಕುರಿಗಳು ಸಾವನ್ನಪ್ಪಿದ ಘಟನೆ ಸುವರ್ಣ ಸೌಧ ಬಳಿಯ ಕೊಂಡಸಕೊಪ್ಪ ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಹಾಗೂ ಸುನಿಲ ದೇಮಣ್ಣವರ ಎಂಬವರ ಕುರಿಗಳು ಸಾವನ್ನಪ್ಪಿವೆ.  ಕಳೆದ ನಾಲ್ಕು ದಿನಗಳ ಹಿಂದೆ ಪಂಚಮಸಾಲಿ ಹೋರಾಟದಲ್ಲಿ ಪಾಲ್ಗೊಂಡವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಉಳಿದ ಅನ್ನ ರೊಟ್ಟಿ ಜನರು ಸ್ಥಳದಲ್ಲಿಯೇ ಎಸೆದು ಹೋಗಿದ್ದರು.
ಕುರಿಗಳು ಮೇಯಲು ಹೋದಾಗ ಈ ಅನ್ನ ರೊಟ್ಟಿ ತಿಂದಿವೆ. ಈ ಊಟವನ್ನು ಸೇವಿಸಿ ೭೦ ಕುರಿಗಳು ಅಸ್ವಸ್ಥಗೊಂಡು ಅದರಲ್ಲಿ ೧೦ ಕುರಿಗಳು ಸಾವನ್ನಪ್ಪಿವೆ. ಇನ್ನು ಎರಡು ಕುರಿಗಳ ಸ್ಥಿತಿ ಚಿಂತಾಜನಕವಾಗಿವೆ ಸ್ಥಳಕ್ಕೆ ಕೆ ಕೆ ಕೊಪ್ಪ ಪಶು ವೈದ್ಯಾಧಿಕಾರಿ  ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ಮುಂದು ವರಿಸಿದ್ದಾರೆ.
TV24 News Desk
the authorTV24 News Desk

Leave a Reply