ವಿಜಯಪುರ

ನಂದಿ ಸಕ್ಕರೆ ಶುಗರ್ಸ್ ಪ್ರಕರಣ: ಓರ್ವ ಕಾರ್ಮಿಕ ಸಾವು

ವಿಜಯಪುರ:ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಾಪಿಸಿದ್ದ ನೂತನ ಬಾಯ್ಲರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.ನಿನ್ನೆ ಮದ್ಯಾಹ್ನದ ವೇಳೆ ಜರುಗಿದ್ದ ಅನಾಹುತದಲ್ಲಿ ಐವರು ಕಾರ್ಮಿಕರಿಗೆ ಗಂಭೀರ ಗಾಯ ಗೊಂಡಿದ್ದರು. ಐವರು ಗಾಯಾಳುಗಳ ಪೈಕಿ ಇಂದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ‌. ಪಶ್ಚಿಮ ಬಂಗಾಲ ಮೂಲದ ಸಂದೀಪ ಮಂಡಳ (21) ಮೃತ ಕಾರ್ಮಿಕನಾಗಿದ್ದು ಪರಸನಜೀತ ಮಂಡಳ, ರಾಜಕುಮಾರ ರಾಮ್ ಸ್ಥಿತಿ ಗಂಭೀರವಾಗಿದೆ.ಇಮ್ರಾನ್ ಅನ್ಸಾರಿ, ಅಶೊಕಕುಮಾರ ರಾಮ ಇವರಿಗೆ ಚಿಕಿತ್ಸೆ ಮುಂದುವರೆದಿದೆ‌. ಗಾಯಾಳುಗಳಿಗೆ ವಿಜಯಪುರ ನಗರದ ಬಿಎಲ್ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ‌. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರೋ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ದುರ್ಘಟನೆ ಸಂಭವಿಸಿತ್ತು. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TV24 News Desk
the authorTV24 News Desk

Leave a Reply