ರಾಮದುರ್ಗ: ನಗರದಲ್ಲಿಂದು ಕಟ್ಟಡ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಕುರಿತು ಪಟ್ಟಣದ ಮಿನಿ ವಿಧಾನಸೌಧದಿಂದ ಬೃಹತ ರ್ಯಾಲಿ ಮೂಲಕ ತಹಶೀಲ್ದಾರ್ ಕಚೇರಿ ತೆರಳಿ ಮನವಿಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಅಸಂಘಟಿತ ವಲಯ ದ ಕಾರ್ಮಿಕರ ಹನ್ನೊಂದು ವರ್ಗಗಳಾದ ಟೈಲರ್ಸ್, ಕುಂಬಾರ್, ಹಮಾಲರು ,ಚಮ್ಮಾರರು ,ಅಕ್ಕಸಾಲಿಗರು ,ಮನೆ ಕೆಲಸದವರು, ಮೆಕಾನಿಕ್ ,ಚಿಂದಿಯುವರು, ಅಗಸರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕರು ಬಹಳಷ್ಟು ತೊಂದರೆಯಲ್ಲಿದ್ದಾರೆ 2020 ಕರೋನ ವೈರಸ್ ಸಮಯದಿಂದ ಈ ವರ್ಗಗಳಲ್ಲಿ ಸರಿಯಾದ ವ್ಯಾಪಾರ ಇಲ್ಲದೆ ಕಾರ್ಮಿಕರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದು ಎಲ್ಲಾ ಕಾರ್ಯಕರ್ತರು ಈ ಕ್ಷಣದಲ್ಲಿ ಪ್ರತಿಭಟನೆ ಮೂಲಕ ಹೇಳಿಕೊಂಡರು ಮುಂದೆ ಇವರ ಬೇಡಿಕೆಯು ಮರಣ ಸಹಾಯಧನ ಆರೋಗ್ಯ ಸಹಾಯಧನ ಮಕ್ಕಳ ವಿದ್ಯಾಭ್ಯಾಸ ವಿದ್ಯಾರ್ಥಿ ವೇತನ ಮಕ್ಕಳ ಮದುವೆ ಈ ರೀತಿ ಯಾವುದೇ ಸೌಲತ್ತುಗಳು ಸಂಘಟಿತ ಕಾರ್ಮಿಕರಿಗೆ ಸಿಗುತ್ತಿಲ್ಲ ಅದಕ್ಕಾಗಿ ಸರ್ಕಾರ ವಿಶೇಷವಾದ ಗಮನ ಹರಿಸಿ ಕಟ್ಟಡ ಕಾರ್ಮಿಕರುಗಳಿಗೆ ಸವಲತ್ತುಗಳನ್ನು ಸಂಘಟಿತ ಕಾರ್ಮಿಕರಿಗೆ ನೀಡಬೇಕೆಂದು ಕರ್ನಾಟಕ ರಾಜ್ಯ ಇಂದಿರಾಗಾಂಧಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಸರಕಾರಕ್ಕೆ ಒತ್ತಾಯಿಸಿದೆ