ಬೆಳಗಾವಿ

ಕಟ್ಟಡ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ ಪ್ರತಿಭಟನೆ 

ರಾಮದುರ್ಗ:  ನಗರದಲ್ಲಿಂದು  ಕಟ್ಟಡ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಕುರಿತು ಪಟ್ಟಣದ ಮಿನಿ ವಿಧಾನಸೌಧದಿಂದ ಬೃಹತ  ರ್ಯಾಲಿ ಮೂಲಕ ತಹಶೀಲ್ದಾರ್ ಕಚೇರಿ ತೆರಳಿ ಮನವಿಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಅಸಂಘಟಿತ ವಲಯ ದ ಕಾರ್ಮಿಕರ ಹನ್ನೊಂದು ವರ್ಗಗಳಾದ ಟೈಲರ್ಸ್, ಕುಂಬಾರ್, ಹಮಾಲರು ,ಚಮ್ಮಾರರು ,ಅಕ್ಕಸಾಲಿಗರು ,ಮನೆ ಕೆಲಸದವರು, ಮೆಕಾನಿಕ್ ,ಚಿಂದಿಯುವರು, ಅಗಸರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕರು ಬಹಳಷ್ಟು ತೊಂದರೆಯಲ್ಲಿದ್ದಾರೆ 2020 ಕರೋನ ವೈರಸ್ ಸಮಯದಿಂದ ಈ ವರ್ಗಗಳಲ್ಲಿ ಸರಿಯಾದ ವ್ಯಾಪಾರ ಇಲ್ಲದೆ ಕಾರ್ಮಿಕರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದು ಎಲ್ಲಾ ಕಾರ್ಯಕರ್ತರು ಈ ಕ್ಷಣದಲ್ಲಿ ಪ್ರತಿಭಟನೆ ಮೂಲಕ ಹೇಳಿಕೊಂಡರು ಮುಂದೆ ಇವರ ಬೇಡಿಕೆಯು ಮರಣ ಸಹಾಯಧನ ಆರೋಗ್ಯ ಸಹಾಯಧನ ಮಕ್ಕಳ ವಿದ್ಯಾಭ್ಯಾಸ ವಿದ್ಯಾರ್ಥಿ ವೇತನ ಮಕ್ಕಳ ಮದುವೆ ಈ ರೀತಿ ಯಾವುದೇ ಸೌಲತ್ತುಗಳು ಸಂಘಟಿತ ಕಾರ್ಮಿಕರಿಗೆ ಸಿಗುತ್ತಿಲ್ಲ ಅದಕ್ಕಾಗಿ ಸರ್ಕಾರ ವಿಶೇಷವಾದ ಗಮನ ಹರಿಸಿ ಕಟ್ಟಡ ಕಾರ್ಮಿಕರುಗಳಿಗೆ ಸವಲತ್ತುಗಳನ್ನು ಸಂಘಟಿತ ಕಾರ್ಮಿಕರಿಗೆ ನೀಡಬೇಕೆಂದು ಕರ್ನಾಟಕ ರಾಜ್ಯ ಇಂದಿರಾಗಾಂಧಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಸರಕಾರಕ್ಕೆ ಒತ್ತಾಯಿಸಿದೆ
TV24 News Desk
the authorTV24 News Desk

Leave a Reply