ಬೆಳಗಾವಿ: ಪೋರ್ಟ ರೋಡನಲ್ಲಿ ಬೆಂಕಿ ತಗುಲಿ 8 ರಿಂದ 9 ಅಂಗಡಿಗಳಗೆ ಬೆಂಕಿ ಪ್ರಕರಣ ವಿಚಾರ ಪ್ರತಿ ಅಂಗಡಿ ಮಾಲೀಕರಿಗೆ ಕಾಂಗ್ರೆಸ್ ಯುವ ಘಟಕದಿಂದ ಹತ್ತು ಸಾವಿರ ಸಹಾಯ ಧನ ನೀಡಲು ತೀರ್ಮಾನ ಮಾಡಲಾಗಿದ್ದು, ಬೆಳಗಾವಿ ಹಾಗೂ ಚಿಕ್ಕೋಡಿ ಕಾಂಗ್ರೆಸ್ ಘಟಕದಿಂದ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ ಇದ್ಯಾವುದೇ ಪೊಲಿಟಿಕಲ್ ಅಲ್ಲ, ಸರ್ಕಾರ ಕೂಡ ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕು ಎಂದು ನಲಪಡ್ ತಿಳಿಸಿದರು.
2023ರ ಚುನಾವಣೆಯಲ್ಲಿ ಯುವ ಸಮೂಹಕ್ಕೆ ಟಿಕೆಟ್ ನೀಡಲು ಆಗ್ರಹ ವಿಚಾರವಾಗಿ ಗೆಲ್ಲುವ ಕ್ಯಾಂಡಿಡೇಟ್ ಗೆ ಟಿಕೆಟ್ ಸಿಗಬೇಕು ಎಂಬುದು ನಮ್ಮ ಉದ್ದೇಶ, ನಾವೂ ಕೂಡ 22 ಯುವಕರಿಗೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದ್ದೇವೆ, ಈಗಾಗಲೇ ಯುವ ಘಟಕದ ವತಿಯಿಂದಲೂ ಅರ್ಜಿ ಸಲ್ಲಿಸಿದ್ದೇವೆ ಎಂದರು.
ಪಕ್ಷ ಬೆಳೆಯಬೇಕು ಎಂಬುದು ನನ್ನ ಉದ್ದೇಶ, ಇದಕ್ಕಾಗಿ ನಾನು ನಿರಂತರ ಹೋರಾಟ ಮಾಡುತ್ತೇನೆ, ನಾನು ಎಲ್ಲಿಯೂ ಟಿಕೆಟ್ ಕೊಡುವಂತೆ ಅಪ್ಲಿಕೇಶನ್ ಹಾಕಿಲ್ಲ, ನಮಗೆ ಟಿಕೆಟ್ ಸಿಗೋದು ಮುಖ್ಯ ಅಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಮುಖ್ಯ ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದರು.