ಬೆಳಗಾವಿ: ನೆಹರು ನಗರದಲ್ಲಿ ನಿರ್ಮಾಣ ಆಗಿರುವ ಕನ್ನಡ ಭವನ ರಂಗಮಂದಿರ ಉದ್ಘಾಟನಾ ಸಮಾರಂಭದಲ್ಲಿ ಅನೇಕ ಸಚಿವರು ಭಾಗಿಯಗಿಲಿದ್ದು, ಭವನದಲ್ಲಿ 400 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಿ.ಎಂ.ಬೊಮ್ಮಾಯವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಜಿ ರಾಜ್ಯ ಸಭಾ ಸದಸ್ಯ ಪ್ರಭಾಕ ಕೋರೆ ಹೇಳಿದರು
ಭವನ ನಿರ್ಮಾಣಕ್ಕೆ 10 ಕೋಟಿ ಖರ್ಚಾಗಿದ್ದು ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ವಿಶ್ರಾಂತಿಗೆ ಕೋಣೆಗಳ ವ್ಯವಸ್ಥೆ,, ಕಲಾವಿದರಿಗೆ ಮೇಕಪ್ ಮಾಡಲು ಪ್ರತ್ಯೇಕ ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಕಲೆ, ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಿ ಮಾತ್ರ ಈ ಭವನದ ಬಳಕೆ ಆಗಲಿದೆ ಎಂದು ಪ್ರಭಾಕರ ಕೋರೆ ಅವರು ತಿಳಿಸಿದರು.ಭವನ ಉದ್ಘಾಟನೆ ಬಳಿಕ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.