ಬೆಳಗಾವಿಬೆಳಗಾವಿ ನಗರ

ಮುರಗೇಶ ನಿರಾಣಿಯನ್ನು ಏಕ ವಚನದಲ್ಲಿ ವಾಗ್ದಾಳಿ ಮಾಡಿದ ಬಸನಗೌಡಾ ಪಾಟೀಲ ಯತ್ನಾಳ 

 ಬೆಳಗಾವಿ: ಬಸನಗೌಡಾ ಪಾಟೀಲ ಯತ್ನಾಳ ಮುರಗೇಶ ನಿರಾಣಿಯನ್ನು ಹಿಗ್ಗಾ ಮುಗ್ಗಾ ಏಕ ವಚನದಲ್ಲಿ ವಾಗ್ದಾಳಿ ಮಾಡಿದರು.ಸುವರ್ಣಸೌಧ ಮುಂಭಾಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಮುರಗೇಶ ನೀರಾಣಿ ನನ್ನ ಮುಂದೆ ಬಚ್ಚಾ ನನ್ನ ಮನೆಗೆ ಬಂದು ಟಿಕೇಟ್ ಕೇಳುವ ಆಸಾಮಿ ಈಗ ನನ್ನ ಬಗ್ಗೆ ಇಲ್ಲ ಸಲ್ಲದ ಮಾತು ಆಡುತ್ತಿತ್ತಾನೆ  ಮುರಗೇಶ ನಿರಾಣಿ ಹಿಂದೂ ದೇವತೆಗಳ ಬಗ್ಗೆ ಒಂದು ಆಡಿಯೋ ಹರಿ ಬಿಟ್ಟಿದ್ದರು. ಈಗ ಹಿಂದು ಸ್ವಾಮಿಗಳ ಬಗ್ಗೆ ಮಾತನಾಡಬೇಡ ಅಂತಾರೆ . ಇಂಥವರು ಸಿ ಎಂ ಆದರೆ ವಿಧಾನಸೌಧಕ್ಕೆ ಅವಮಾನ ಎಂದರು .ಪಂಚಮಸಾಲಿ ಸಮುದಾಯಕ್ಕೆ ೨ ಎ ಮಿಸಲಾತಿ ನೀಡುವ ವಿಚಾರವಾಗಿ ಈಗಲೂ ಸರ್ಕಾರದ ಮೇಲೆ ವಿಶ್ವಾಸ ಇದೆ. ಇಲ್ಲವಾದರೆ ನಾಳೆ ಪ್ರತಿಭಟನೆ ಎದುರಿಸಲು ಸರ್ಕಾರ ಸಿದ್ದವಾಗಿರಲಿ ಸುಮಾರು ೨೫ ಲಕ್ಷ ಜನ ಸೇರಬಹುದು ಯಾರಿಗೂ ಹಣ, ಗಾಡಿ ನೀಡುತ್ತಿಲ್ಲಾ ಸ್ವಯಂ ಪ್ರೇರಿತವಾಗಿ ಜನ ಭಾಗವಹಿಸುತ್ತಾರೆ.  ಸಭೆಗೆ ನಿರಾಣಿ ಬಂದರೆ ವೇದಿಕೆ ಕೆಳಗೆ ಕುಳಿತುಕೊಳ್ಳಲಿ ಎಂದರು.
TV24 News Desk
the authorTV24 News Desk

Leave a Reply